ಧರ್ಮಸ್ಥಳ: ದೊಂಡೋಲೆ ನಿವಾಸಿ ನಾಗೇಶ್ ಹೃದಯಾಘಾತದಿಂದ ನಿಧನ

Suddi Udaya

ಧರ್ಮಸ್ಥಳ: ಕಲ್ಲೇರಿಯಲ್ಲಿ ರಾವ್ ಅಂಡ್ ರಾವ್ ಇಂಜಿನಿಯರಿಂಗ್ ವರ್ಕ್ ನ ಲೇತ್ ವರ್ಕ‌ರ್ ನಾಗೇಶ್ (56ವ) ರವರು ಜೂನ್ 2 ರಂದು ದೊಂಡೋಲೆಯ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ನಳಿನಿ, ಪುತ್ರರಾದ ನಯನ್, ಸಚಿನ್, ಮಗಳು ಕಾವ್ಯ, ಅಳಿಯ ಯಶೋದರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಾಗೇಶ್ ರವರ ಮಗ ನಯನ್ ಕುಮಾರ್ ಉದ್ಯೋಗ ನಿಮಿತ್ತ ವಿದೇಶದಲ್ಲಿರುವುದರಿಂದ ನಾಗೇಶ್ ರವರ ಮೃತದೇಹದ ಅಂತಿಮ ಸಂಸ್ಕಾರ ಜೂನ್ 4ರಂದು ನಡೆಯಲಿದೆ.

Leave a Comment

error: Content is protected !!