25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ವೇಣೂರು ಆರಕ್ಷಕ ಠಾಣೆಯ ವತಿಯಿಂದ ಬೀಟ್ ಪೋಲೀಸ್ ಪಂಪಾಪತಿಯವರಿಂದ ಸಾರ್ವಜನಿಕರಿಗೆ ಸೈಬರ್ ಕ್ರೈಂ ,ಸಂಚಾರ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ

ಬಳಂಜ: ವೇಣೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಶೈಲ್ ಡಿ ಮುರಗೋಡ್ ರವರ ಮಾರ್ಗದರ್ಶನದಂತೆ ಬಳಂಜ, ನಾಲ್ಕೂರು, ತೆಂಕಕಾರಂದೂರು, ಕರಂಬಾರು, ಶಿರ್ಲಾಲು ಗ್ರಾಮಗಳ ಬೀಟ್ ಪೊಲೀಸ್ ಎಚ್.ಸಿ ಬಿ.ಪಂಪಾಪತಿ ಬೀಟ್ ಸಭೆ ಮಾಡಿ ಸಾರ್ವಜನಿಕರಿಗೆ ಸೈಬರ್ ಕ್ರೈಂ ಸಂಚಾರ ನಿಯಮ ಪಾಲನೆ ಹಾಗೂ ಇತ್ತೀಚಿನ ದಿನಮಾನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿಯನ್ನು ಬಳಂಜ ಶ್ರೀದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.

ಸಾರ್ವಜನಿಕರು ಪ್ರಸ್ತುತ ಮಳೆಗಾಲವಾಗಿರುವುದರಿಂದ ರಾತ್ರಿ ವೇಳೆ ಮಳೆ ಬೀಳುತ್ತಿರುವ ಸಮಯ ಮಳೆ ಶಬ್ದಕ್ಕೆ ಮನೆಯ ಬಾಗಿಲು ಹೊಡೆದು ಕಳ್ಳತನ ಮಾಡುವ ತಂತ್ರಗಾರಿಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ತಮ್ಮ ಬೆಲೆಬಾಳುವ ಒಡವೆ /ಹಣವನ್ನು ಅಗತ್ಯಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ /ಸೇಫರ್ ಲಾಕ್ ನಲ್ಲಿ ಇಡುವುದು ಉತ್ತಮ. ಸಾರ್ವಜನಿಕರು ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಮನೆ ಕಡೆ ಗಮನಿಸುವಂತೆ ತಿಳಿಸಿ ತೆರಳುವುದು ಉತ್ತಮ. ಮನೆಯಲ್ಲಿ ಬೆಲೆಬಾಳುವ ವಸ್ತು / ಒಡವೆಗಳು ಇಟ್ಟುಕೊಂಡವರು ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು, ಮನೆಯ ಹೊರಾಂಗಣದಲ್ಲಿ ರಾತ್ರಿವೇಳೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ಮಾಡುವುದು. ಮನೆಯಲ್ಲಿ ನಾಯಿ ಸಾಕಿರುವವರು ರಾತ್ರಿವೇಳೆ ಹೊರಗಡೆ ನಾಯಿಗಳನ್ನು ಕಟ್ಟಿಹಾಕದೆ ಹೊರಗಡೆ ಬಿಡುವುದು ಒಳ್ಳೆಯದು. ಸಾರ್ವಜನಿಕರು ತಮ್ಮ ಮನೆ ಆಸುಪಾಸು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವ ಬಗ್ಗೆ /ವ್ಯಾಪಾರಕ್ಕೆ ಬರುವವರ ಬಗ್ಗೆ ಗಮನಿಸುವುದು ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆಗೆ /112 ಗೆ ಕರೆಮಾಡಿ ತಿಳಿಸಿ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಪೋಲೀಸರ ಸಹಾಯ ಬೇಕಾದಲ್ಲಿ ತುರ್ತು ಪೊಲೀಸ್ ಸೇವೆ 112 ಗೆ ಕರೆಮಾಡುವುದು. ನಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಮುನ್ನ ಜಾಗರೂಕರಾಗೋಣ .ಮನೆಗಳಲ್ಲಿ ಜನ ಇರುವಾಗಲೇ ಮನೆ ಬಾಗಿಲು ಹೊಡೆದು ಕಳ್ಳತನ ಮಾಡುವ ಗ್ಯಾಂಗ್ ಸಂಚರಿಸುತ್ತಿದೆ ಎಚ್ಚರಿಕೆ ವಹಿಸಿ ಅದುಲ್ಲದೆ ಆನ್ಲೈನ್ ವಂಚನೆ ಆದಲ್ಲಿ ಸಾರ್ವಜನಿಕರು 1 ಗಂಟೆ ಒಳಗಾಗಿ ಟೋಲ್ ಫ್ರೀ ನಂಬರ್ 1930 ಗೆ ಕರೆ ಮಾಡಿ ದೂರು ದಾಖಲಿಸುವುದು ಹಾಗೂ ನಿಮ್ಮ ಮೊಬೈಲ್ ಗಳಿಗೆ ಬರುವ ಬ್ಲಾಂಕ್ ಮೆಸೇಜ್ ಓಪನ್ ಮಾಡದೆ ಡಿಲೀಟ್ ಮಾಡುವುದು ಎಂಬುದಾಗಿ ಬೀಟ್ ಅಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಕುಲಾಲ್ ರಿಗೆ ಗೌರವಾರ್ಪಣೆ

Suddi Udaya

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಹಳೆಕೋಟೆಯ ಮನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ; ಕುಟುಂಬಸ್ಥರಿಗೆ ಸಾಂತ್ವಾನ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

“ನಾನು ರಾಜಕೀಯ ನಿವೃತ್ತಿ ನೀಡಿಲ್ಲ,: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಂದ ಸ್ಪಷ್ಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪಂಚಾಯತ್‌ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ

Suddi Udaya
error: Content is protected !!