ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

Suddi Udaya

ಗರ್ಡಾಡಿ: ಇಲ್ಲಿನ ಬೋಳಿಯಾರ್ ನ ಗೋಪಕುಮಾರ್ ಮತ್ತು ಸುಮೇಶ್ ಕುಮಾರ್ ರವರಿಗೆ ಸೇರಿದ ಜಮೀನಿನ ಗೇಟಿನೆದುರು 25 ಮೇಕೆಯ ತಲೆ ಕಡಿದು ವಾಮಾಚಾರ ನಡೆಸಿರುವ ಘಟನೆ ಜೂ.10ರಂದು ಬೆಳಕಿಗೆ ಬಂದಿದೆ.

ಗೇಟಿನೆದುರು ಮೇಕೆಯ ತಲೆಗಳ ಜೊತೆ ಆ ಕುಟುಂಬದವರ ಫೋಟೋ, ಕೆಲಸದವರ ಫೋಟೋ, ಸಮಾಜದಲ್ಲಿರುವ ಪ್ರಮುಖರ ಫೋಟೋ ಬಳಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಜಾಗದ ವಿಚಾರದಲ್ಲಿಯೇ ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಗೋಪಕುಮಾರ್ ರವರಿಗೆ ಸೇರಿದ ಜಾಗವನ್ನು ಮಂಗಳೂರಿನ ರಾಜೇಶ್ ಎಂಬಾತ ಒಳಗೆ ಹಾಕಿಕೊಳ್ಳಲು ಪ್ರಯತ್ನಿಸಿದ್ದು, ಈ ಹಿನ್ನಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ ಎಂದು ಈ ಜಾಗದ ಮ್ಯಾನೇಜರ್ ಲಿಬಿನ್ ತಿಳಿಸಿದ್ದಾರೆ.

ಒಂದು ವಾರದ ಹಿಂದೆ 25 ಮೊಟ್ಟೆ, ಹಂದಿಯ ಮುಖ ಬಳಸಿ ವಾಮಾಚಾರ ಇದೇ ಜಾಗದಲ್ಲಿ ಮಾಡಿಸಿದ್ದರು. ಈಗ ಮತ್ತೆ ಮೇಕೆಯ ತಲೆ ಕಡಿದು ಹಾಕಿ ವಾಮಾಚಾರ ಮಾಡಿರುವುದು ಸ್ಥಳೀಯರು ಆತಂಕದಲ್ಲಿದ್ದಾರೆ.

Leave a Comment

error: Content is protected !!