July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗೆ ರೂ.91ಲಕ್ಷ ಕೊರತೆ : ಶಾಸಕ ಹರೀಶ್ ಪೂಂಜರವರು ರೂ.1 ಕೋಟಿ 5 ಲಕ್ಷ ಅನುದಾನ ನೀಡಿದ್ದು ದೇಗುಲದ ಅಭಿವೃದ್ಧಿಗೆ ಬಳಕೆಯಾಗಿದೆ: ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು : ಪುರುಷೋತ್ತಮ ರಾವ್

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯಲ್ಲಿ ಹಣಕಾಸಿನ ಕೊರತೆಯಾಗಿದ್ದು ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು ಎಂದು ಪುರುಷೋತ್ತಮ ರಾವ್ ಹೇಳಿದರು.ಅವರು ಜೂ.13ರಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ 2023ರ ಫೆ.19ರಿಂದ 27 ರವರೆಗೆ ಬಹಳ ವಿಜೃಂಭಣೆಯಿಂದ ಜರಗಿರುತ್ತದೆ. ಸರಕಾರದಿಂದ ಶಾಸಕ ಹರೀಶ್ ಪೂಂಜರವರು 1 ಕೋಟಿ 5 ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿ ದೇವಾಲಯದ ಜೀರ್ಣೋದ್ಧಾರ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಹಾಗೂ ಇನ್ನುಳಿದ ಜೀರ್ಣೋದ್ದಾರದ ಕೆಲಸಗಳಿಗೆ ನಾನು ರೂ 35 ಲಕ್ಷ ಹಾಗೂ ಪ್ರಶಾಂತ ಹೆಗ್ಡೆ ಕುಂಟಲ್ಮಾರ್ 19 ಲಕ್ಷ ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಪಡೆದು ಜೀರ್ಣೋದ್ದಾರ ಸಮಿತಿಯ ಖಾತೆಗೆ ಜಮಾಗೊಳಿಸಿ ಕಾಮಗಾರಿ ಮುಂದುವರಿಸಿದೆವು.ಕಾಮಗಾರಿ ಮುಕ್ತಾಯಕ್ಕೆ ಪೂರಕವಾಗಿ ಮಾಡಿಕೊಂಡ ಸಾಲಗಳ ಪೈಕಿ ಪ್ರಶಾಂತ ಹೆಗ್ಡೆ ಯವರ ರೂ.19 ಲಕ್ಷಗಳನ್ನು ಸಮಿತಿಯಿಂದ ಹಿಂಪಾವತಿಸಲಾಗಿಯಿತು.2014 ರಿಂದ ಈವರೆಗೆ ಆದ ಕಾಮಗಾರಿಗಳಿಗೆ ರೂಪಾಯಿ 6.65 ಕೋಟಿ ಗಳಷ್ಟು ದೇಣಿಗೆ ಸಂಗ್ರಹವಾಗಿ 7.56 ಕೋಟಿ ಖರ್ಚಾಗಿದ್ದು, ಸುಮಾರು 91 ಲಕ್ಷದ ಕೊರತೆ ಆಗಿರುತ್ತದೆ. ವೈಯಕ್ತಿಕ ಸಾಲಗಳ ಮರು ಪಾವತಿಗೆ ಹಾಗೂ ಕಾಮಗಾರಿ ಮಾಡಿದವರಿಗೆ ಪಾವತಿ ಮಾಡುವಲ್ಲಿ ಈಗಾಗಲೇ ಬಹಳ ವಿಳಂಬ ಆಗಿರುತ್ತದೆ.ದೇವಾಲಯ ಸಂಪೂರ್ಣ ಋಣ ಮುಕ್ತವಾಬೇಕು ಈ ನಿಟ್ಟಿನಲ್ಲಿ ಭಕ್ತಾದಿಗಳೆಲ್ಲರೂ ಕೈಲಾದಷ್ಟು ಧನಸಹಾಯವನ್ನು ದೇವಾಲಯಕ್ಕೆ ನೀಡಬೇಕು. ದೇವಾಲಯದ ಆಡಳಿತಾಧಿಕಾರಿಗಳೂ ಅಥವಾ ಮುಂದಿನ ವ್ಯವಸ್ಥಾಪನ ಸಮಿತಿಯವರು ಹಣ ಆದಷ್ಟು ಕ್ರೋಢೀಕರಿಸಿ, ದೇವಾಲಯ ಋಣಮುಕ್ತಗೊಳ್ಳುವವರೆಗೆ ಹೊಸ ಯೋಜನೆಗಳನ್ನು ಮುಂದೂಡಿ ಸಹಕರಿಸಬೇಕಾಗಿ ವಿನಂತಿಸಿಕೊಂಡರು. ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ ಸಂಗ್ರಹ ಆದ ಮೊತ್ತ ವನ್ನು ಬ್ಯಾಂಕ್‌ ಸಾಲಕ್ಕೆ ಕಂತು ಪಾವತಿಸಲು ಮಾರ್ಚ್ ತಿಂಗಳ ಕೊನೆಗೆ ಕಚೇರಿಯಿಂದ ಚೆಕ್ ಪುಸ್ತಕ ಪಡೆಯಲು ಹೋದಾಗ ಆಡಳಿತಾಧಿಕಾರಿ ಚೆಕ್ ಪುಸ್ತಕ ನೀಡಲು ನಿರಾಕರಿಸಿರುವುದರಿಂದ ಕಂತು ಭರಿಸಲು ಉಳಿದಿದೆ. ಮುಂದೆ ಹೆಚ್ಚುವರಿ ಬಡ್ಡಿಯನ್ನು ಭರಿಸ ಬೇಕಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್, ಗ್ರಾಮ ಸಮಿತಿ ಸಂಚಾಲಕ ಉಮೇಶ್ ,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸುಂದರ ಹೆಗ್ಡೆ , ಸದಸ್ಯರಾದ ಪ್ರಶಾಂತ್ ಹೆಗ್ಡೆ , ಚಂಪಾ, ಯಶೋಧ, ಅಣ್ಣು ಮೂಲ್ಯ, ಕಾರ್ತೀಕ್ ನಿಟ್ಟಡೆ , ಸತೀಶ್ ಕೆರಿಯಾರ್ ಉಪಸ್ಥಿತರಿದ್ದರು.

Related posts

ಜಿಲ್ಲಾಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತೆ ಉಮಾ ಡಿ ಗೌಡರಿಗೆ ಬೆಳ್ತಂಗಡಿ ತಾಲೂಕು ಮುಖ್ಯ ಶಿಕ್ಷಕರ ಸಂಘದಿಂದ ಸನ್ಮಾನ

Suddi Udaya

ಪುಂಜಾಲಕಟ್ಟೆ : ನಯನಾಡು ಸಮೀಪ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಪಡಂಗಡಿ: ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಾಮೂಹಿಕ ಶನಿ ಪೂಜೆ

Suddi Udaya

ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ : ಬೆಳ್ತಂಗಡಿಯ ಅವಳಿ ಮಕ್ಕಳು ವಿಜೇತರು

Suddi Udaya

ಗುರುವಾಯನಕೆರೆ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿಯಾಗಿ- ಕೊಡಮಣಿತ್ತಾಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ಹಾಗೂ ಮೃತ್ಯುಂಜಯ ಹೋಮ: ಮೆರವಣಿಗೆಯ ಮೂಲಕ ಮುಷ್ಟಿ ಕಾಣಿಕೆ ದೈವಕ್ಕೆ ಸಮಪ೯ಣೆ

Suddi Udaya

ಗರ್ಡಾಡಿ ಯುವಕ ಮಂಡಲ ವತಿಯಿಂದ 34ನೇ ವರ್ಷದ ಮೊಸರು ಕುಡಿಕೆ ಉತ್ಸವ: ಅಧ್ಯಕ್ಷರಾಗಿ ಹರೀಶ್ ಪೂಜಾರಿ ಬರಮೇಲು

Suddi Udaya
error: Content is protected !!