ಉಜಿರೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರಿಂದ ಮೂರ್ಚೆ ರೋಗದಿಂದ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ರಕ್ಷಣೆ

Suddi Udaya

ಉಜಿರೆ: ನೇತ್ರಾವತಿ ಅಜಕುರಿ ಮಾರ್ಗವಾಗಿ ಮುಂಡಾಜೆ ತೆರಳುತ್ತಿದ್ದ ಸಚಿನ್ ಬೀಡೆ ಅವರು ಅಪರಿಚಿತ ವ್ಯಕ್ತಿ ಆಜಕುರಿ ಬಳಿ ಮಾರ್ಗದ ಮದ್ಯೆ ಬಿದ್ದು ನರಳುತ್ತಿದ್ದನ್ನು ಗಮನಿಸಿ “ಫಿಡ್ಸ್” (ಮೂರ್ಚೆ ರೋಗ) ಇರಬಹುದೆಂದು ಶಂಕಿಸಿ ಕೀಲಿಯನ್ನು ಹಾಗೂ ಸ್ಥಳದಲ್ಲಿ ದೊರೆತ ಸ್ಟೀಲ್ ಲೋಟವನ್ನು ಕೊಟ್ಟು ನೈಜ ಸ್ಥಿತಿಗೆ ಬಂದ ನಂತರ ಸ್ನೇಕ್ ಪ್ರಕಾಶ್ ಅವರಿಗೆ ಕರೆ ಮಾಡಿ ಅವರ ಮಾರ್ಗದರ್ಶನದಂತೆ ಪೊಲೀಸ್ ರಿಗೆ ಕರೆ ಮಾಡಿ ಅವರು ಬಂದು ಕರೆದುಕೊಂಡು ಹೋಗುವ ತನಕ ಸಹಕರಿಸಿದರು.

ಕಕ್ಕಿಂಜೆ ಪಿಕಪ್ ನವರು ಹಾಗೂ ಊರವರು ಸಹಕರಿಸಿದರು.

Leave a Comment

error: Content is protected !!