ಪಟ್ರಮೆ: ಉಳಿಯಬೀಡುನಲ್ಲಿ ‘ಭರತ ಬಾಹುಬಲಿ’ ತಾಳಮದ್ದಲೆ

Suddi Udaya

ಪಟ್ರಮೆ: ಇಲ್ಲಿಯ ಉಳಿಯಬೀಡುನಲ್ಲಿ ‘ಭರತ ಬಾಹುಬಲಿ’ ತಾಳಮದ್ದಲೆ ಕಾರ್ಯಕ್ರಮವು ಜೂ. 16 ರಂದು ನಡೆಯಿತು.

ಭಾಗವತರಾಗಿ ಶ್ರೀಮತಿ ಕಾವ್ಯಶ್ರೀ ಅಜೇರು, ಚೆಂಡೆ ಬಿ ಸೀತಾರಾಮ ತೋಳ್ವಾಡಿತ್ತಾಯ, ಮದ್ದಳೆ ಶ್ರೀ ಜನಾರ್ಧನ ತೋಳಾಡಿತ್ತಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭರತರಾಗಿ ಮುನಿರಾಜ ರೆಂಜಾಳ, ಬಾಹುಬಲಿಯಾಗಿ ರಮಣ ಅಚಾರ್, ಸುನಂದರಾಗಿ ಪ್ರಭಾತ ಬಲ್ನಾಡು, ಬುದ್ಧಿಸಾಗರರಾಗಿ ನಿತೇಶ್ ಬಲ್ಲಾಳ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಯಕ್ಷ ಸಂಘಟಕ ಭುಜಬಲಿ, ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಕುಮಾರ ಹೆಗ್ಡೆ, ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ, ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗುರುಪ್ರಸಾದ್ ನಿಡ್ವಾಣ್ಣಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್, ದೇವಪಾಲ ಅಜ್ರಿ ಉಳಿಯಬೀಡು ಹಾಗೂ ಕುಟುಂಬಸ್ಥರು ಸತ್ಕರಿಸಿದರು.

Leave a Comment

error: Content is protected !!