ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಾ ಒಕ್ಕೂಟದ ಶ್ರೀ ಮಹಾದೇವ ಪ್ರಗತಿಬಂಧು ಸಂಘದ ಸದಸ್ಯ ತಮ್ಮಯ್ಯ ರವರು ಸಂಘದಲ್ಲಿ ಇಂದಿನ ಉಳಿತಾಯ ನಾಳೆಯ ಸುರಕ್ಷೆಗಾಗಿ ಸೇವಾಪ್ರತಿನಿಧಿ ಯವರ ಮಾಹಿತಿಯಂತೆ ಎಲ್.ಐಸಿ ಯ ಮೈಕ್ರೋ ಬಚತ್ ಪಾಲಿಸಿ ಯನ್ನು ನೋಂದಾವಣೆ ಮಾಡಿಕೊಂಡಿದ್ದು ತಮ್ಮಯ್ಯ ರವರು ಕಳೆದ ಜೂನ್ ತಿಂಗಳಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮರಣ ಹೊಂದಿರುತಾರೆ.

ಬಡ ಕುಟುಂಬದವಾರಗಿದ್ದು ತನ್ನ ಸುರಕ್ಷೆಗಾಗಿ ಮಾಡಿದ 2ಲಕ್ಷದ ಮೈಕ್ರೋ ಬಚತ್ ಪಾಲಿಸಿಯಲ್ಲಿ ಮರಣ ಸ್ವಾತಂನ ಮೊತ್ತ 2,00,000/ ಸದ್ರಿ ಕುಟುಂಬಕ್ಕೆ ಮಂಜೂರಾಗಿದ್ದು ಸದ್ರಿ ಮಂಜೂರಾತಿ ಪತ್ರವನ್ನು ಒಕ್ಕೂಟದ ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ , ಅಧ್ಯಕ್ಷ ಗಂಗಾಧರ ಸಾಲ್ಯಾನ್, ಮಾಜಿ ಅಧ್ಯಕ್ಷ ಶಿವಪ್ಪ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಗೀತಾ, ಯಶೋಧರ, ಮಹಾದೇವ ಸಂಘದ ಸದಸ್ಯರಾದ ರಾಮಚಂದ್ರ, ಶೀನಪ್ಪ ಗೌಡ, ಕೊರಗಪ್ಪ ಗೌಡ ಮತ್ತು ವಲಯ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿಧಿ ಪ್ರಭಾ ಉಪಸ್ಥಿತರಿದ್ದರು.

Leave a Comment

error: Content is protected !!