ನಾಲ್ಕೂರು : ಕುದ್ರೋಟ್ಟು ಮುಖ್ಯ ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡುಕೋಣಗಳ ಹಿಂಡು

Suddi Udaya

ಬಳಂಜ: ಬೆಳ್ತಂಗಡಿ ತಾಲ್ಲೂಕಿನ ನಾಲ್ಕೂರು ಗ್ರಾಮದ ಕುದ್ರೋಟ್ಟು ಬಳಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷಗೊಂಡಿದ್ದರಿಂದ ಸ್ಥಳೀಯ ಜನರಲ್ಲಿ ಆತಂಕ ಮೂಡಿದೆ.

ಜೂ 19 ರಂದು ರಾತ್ರಿ ನಾಲ್ಕೂರು ಗ್ರಾಮದ ಕುದ್ರೋಟ್ಟು ಪರಿಸರದ ಮುಖ್ಯ ರಸ್ತೆ ಬಳಿ 5 ರಿಂದ 6 ಕಾಡುಕೋಣಗಳು ಪ್ರತ್ಯಕ್ಷವಾಗಿದೆ.

ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಯುವ ಉದ್ಯಮಿ ಸಚಿನ್ ಶೆಟ್ಟಿ ಕುರೆಲ್ಯ ಕಾಡುಕೋಣವನ್ನು ಗಮನಿಸಿ ವೀಡಿಯೊ ಮಾಡಿ ಫೋಟೋ ತೆಗೆದರು. ವಾಹನವನ್ನು ಕಂಡೂ ಕಾಡುಕೋಣಗಳ ಹಿಂಡು ಸ್ಥಳದಿಂದ ಕಾಡಿನೊಳಗೆ ಹೋಗಿದೆ ಎಂದರು.

Leave a Comment

error: Content is protected !!