ಬೆಳ್ತಂಗಡಿ ವಲಯದ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ವೈದ್ಯಕೀಯ ಸಹಾಯ ಹಸ್ತ

Suddi Udaya

ಕೊಕ್ಕಡ: ಬೆಳ್ತಂಗಡಿ ವಲಯದ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಕೊಕ್ಕಡ ಶ್ರೀ ವಿನಾಯಕ ಮೋಟಾರ್ ವರ್ಕ್ ಶಾಪ್ ನ ಮಾಲಕರಾದ ತಿಮ್ಮಪ್ಪ ಗೌಡ ಅವರಿಗೆ ಅಸೌಖ್ಯದ ಕಾರಣ ತುರ್ತು ಚಿಕಿತ್ಸೆಗಾಗಿ ಸಹಾಯ ಹಸ್ತವನ್ನು ನೀಡಲಾಯಿತು.

ಬೆಳ್ತಂಗಡಿ ವಲಯದ ಅಧ್ಯಕ್ಷ ವಿ.ಎನ್.ಬಾಬುರಾಜ್ ಕಕ್ಕಿಂಜೆ, ಕಾರ್ಯದರ್ಶಿ ಪುರಂದರ ಹೆಗ್ಡೆ ಬೆಳ್ತಂಗಡಿ, ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಜಿರೆ, ಉಪಾಧ್ಯಕ್ಷ ಮಂಜುನಾಥ ಪಟ್ರಮೆ, ಆನಂದ ಪೂಜಾರಿ ಬೆಳ್ತಂಗಡಿ, ಪ್ರಕಾಶ್ ಮುತ್ತಪ್ಪ, ಗ್ಯಾರೇಜ್ ಕಲ್ಲೇರಿ ಹಾಗೂ ಕೊಕ್ಕಡ ಪರಿಸರ ಕಾರ್ಯಕಾರಿಣಿ ಸದಸ್ಯರಾದ ಶಾಂತಕುಮಾರ್, ಕೊಕ್ಕಡ ಗ್ಯಾರೇಜ್ ಮಾಲಕರಾದ ಪರಮೇಶ್ವರ ಗೌಡ, ಲಕ್ಷ್ಮಣ್, ಅನೀಶ್, ಜಗದೀಶ್, ಪ್ರಶಾಂತ್, ಹರೀಶ್, ಜಿತೇಶ್ ಮತ್ತು ಇನ್ನಿತರ ಗ್ಯಾರೇಜ್ ಮಾಲಕರ ಸಹಕಾರದೊಂದಿಗೆ ತಿಮ್ಮಪ್ಪ ಗೌಡ ಅವರಿಗೆ ನಗದು ರೂಪದಲ್ಲಿ ಸಹಾಯ ಹಸ್ತವನ್ನು ನೀಡಲಾಯಿತು.

Leave a Comment

error: Content is protected !!