26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ: ಪೂರ್ವ ಅಧ್ಯಕ್ಷರಿಗೆ ಮತ್ತು ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಸುವರ್ಣ ಸಂಭ್ರಮವು ಉಜಿರೆ ಶ್ರೀ ಕೃಷ್ಣಾನುಗ್ರಹದಲ್ಲಿ ಜೂ. 23 ರಂದು ನಡೆಯಿತು.
ಸುವರ್ಣ ಸಂಭ್ರಮಸ್ತವವನ್ನು ಸ್ಥಾಪಕ ಸದಸ್ಯರಾದ ಎಂ ಜಿ ಶೆಟ್ಟಿ, ವಿಶ್ವನಾಥ್ ಆರ್ ನಾಯಕ್, ಉದ್ಯಮಿ ಸದಾಶಿವ ಶೆಟ್ಟಿ ಉಜಿರೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಪ್ರಥಮ ಮಹಿಳೆ ಸವಿತಾ ಶೆಟ್ಟಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲಯನ್ಸ್ ಜಿಲ್ಲೆ ರಾಜ್ಯಪಾಲರಾದ ಮೇಲ್ವಿನ್ ಡಿಸೋಜ, ಲಯನ್ಸ್ ಪಾಂತ್ಯ ಅಧ್ಯಕ್ಷ ಹೆರಾಲ್ಡ್ ತಾವ್ರೋ ಮೂಡಬಿದ್ರೆ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಲ್ಟ್ ಲಯನ್ಸ್ ಜಿಲ್ಲಾ ಸಂಪುಟ ಕೋಶಾಧಿಕಾರಿ ಸುಧಾಕರ ಭಂಡಾರಿ, ನಿಕಟ ಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ,. ನಿಯೋಜಿತ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಟ್ಟಡ ಸಮಿತಿಯ ಅಧ್ಯಕ್ಷ ರಾಜು ಶೆಟ್ಟಿ, ಕಾರ್ಯದರ್ಶಿ ಅನಂತ ಕೃಷ್ಣ, ಕೋಶಾಧಿಕಾರಿ ಸುಭಾಷಿಣಿ, ಲಿಯೊ ಕ್ಲಬ್ ಅಧ್ಯಕ್ಷೆ ಅಪ್ಸರ ಉಪಸ್ಥಿತರಿದರು.

ಸಂಜೆ ಎಸ್.ಡಿ.ಎಮ್ ಕಾಲೇಜಿನಿಂದ ಉಜಿರೆ ಕೃಷ್ಣ ಅನುಗ್ರಹ ಸಭಾಂಗಣ ತನಕ ಚೆಂಡೆ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ನಂತರ ಚಿನ್ನರ ಚಿಲಿಪಿಲಿ, ಹಾಡಿನ ಝೇಂಕಾರ, 45 ಪೂರ್ವ ಅಧ್ಯಕ್ಷರಿಗೆ ಸನ್ಮಾನ, 5 ಸಾಧಕರಾದ ಲಕ್ಷ್ಮಿ ಗ್ರೂಪ್ ಮೋಹನ್ ಕುಮಾರ್, ಗೋಪಾಲ ಪಣಿಕ್ಕರ್., ಗೋಪಾಲಕೃಷ್ಣ ಕಾಂಚೋಡು, ಬಿ ಎಲ್ ಗಣೇಶ್, ರಾಮಚಂದ್ರ ಶೆಟ್ಟಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಲಯನ್ಸ್ ಜಿಲ್ಲೆಯ ರಾಜ್ಯಪಾಲರಾದ ಮೇಲ್ವಿನ್ ಡಿಸೋಜ
ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್ ತಾವ್ರೋ, ಲಯನ್ಸ್ ಜಿಲ್ಲೆಯ ಸಂಪುಟ ಕಾರ್ಯದರ್ಶಿ ಓಸ್ವಲ್ಟ್, ಲಯನ್ಸ್ ಜಿಲ್ಲೆಯ ಸಂಪುಟ ಕೋಶಾಧಿಕಾರಿ ಸುಧಾಕರ ಭಂಡಾರಿ ಇವರಿಗೆ ಸನ್ಮಾನಿಸಲಾಯಿತು.


ಸಂಜೆ ಪುದರ್ ದಿ ದಾಂಡ ತುಳು ಹಾಸ್ಯಮಯ ನಾಟಕ ನಡೆಯಿತು.

Related posts

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ

Suddi Udaya

ಅ.22 ಬಳಂಜ ಶಾರದೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದ ಸತೀಶ್ ರೈ ಬಾರ್ದಡ್ಕಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಹಾಗೂ ಊರ ಮಹನೀಯರ ಸಹಕಾರದೊಂದಿಗೆ ವಿಜೃಂಭಣೆಯ ಶಾರದೋತ್ಸವಕ್ಕೆ ತಯಾರಿವೈಭವದ ಮೆರವಣಿಗೆ, ಆಟೋಟ ಸ್ಪರ್ಧೆಗಳು,500 ಭಜಕರಿಂದ ಭಜನೆ,ಸಾಂಸ್ಕೃತಿಕ ವೈಭವ ಕಾರ್ಯಕ್ರಮ

Suddi Udaya

ರಕ್ತೇಶ್ವರಿ ಪದವು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗವೇಣಿ ಕೆ.ಎಸ್. ರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಅರಸಿನಮಕ್ಕಿ: ವಾತ್ಸಲ್ಯ ಮನೆಗೆ ಅಡಿಗಲ್ಲು ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya
error: Content is protected !!