April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ

ಉಜಿರೆ: ನಮ್ಮ ಅಂತರಂಗದ ಸಾಮರ್ಥ್ಯವನ್ನು ಅನಾವರಣ ಮಾಡುವುದೇ ನಿಜವಾದ ಶಿಕ್ಷಣ. ವಿದ್ಯಾರ್ಥಿಗಳು ಓದುವುದು , ಬರೆಯುವುದು , ಕೇಳುವುದು ಮಾತ್ರವಲ್ಲದೆ ಸರಿಯಾಗಿ ಅಧ್ಯಯನ ಮಾಡಬೇಕು. ಇದರೊಂದಿಗೆ ಜ್ಞಾನವನ್ನು ಸಂಪಾದಿಸಬೇಕು. ಸಂಸ್ಕೃತವು ಅಂತಹ ಜ್ಞಾನ ಭಂಡಾರವಾಗಿದ್ದು ಮಾತ್ರವಲ್ಲದೆ ವೈಜ್ಞಾನಿಕ ಭಾಷೆ ಕೂಡ ಆಗಿದೆ. ಇದನ್ನು ತಿಳಿದರೆ ಉಳಿದ ಭಾಷೆಗಳನ್ನು ಸುಲಭವಾಗಿ ಅರಿಯಬಹುದು. ಇದರ ಸ್ವಾರಸ್ಯ ತಿಳಿದು ಸುಸಂಸ್ಕೃತರಾಗಿ. ಭಾಷಾ ಅಧ್ಯಯನದಿಂದ ಮೌಲ್ಯದೊಂದಿಗೆ ಉತ್ತಮ ಚಾರಿತ್ರ್ಯ ಸಂಪಾದಿಸಬಹುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಕಲಾ ವಿಭಾಗದ ಡೀನ್ ಡಾ. ಶ್ರೀಧರ ಭಟ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳ ಪದಪ್ರದಾನ ಮಾಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಾಕ್ಷಿಕ ಸಂಸ್ಕೃತ ಡಿಜಿಟಲ್ ಪತ್ರಿಕೆಯನ್ನು ಹಾಗೂ ಪದಾಧಿಕಾರಿಗಳ ನಾಮಫಲಕವನ್ನು ಡಾ.ಶ್ರೀಧರ ಭಟ್ ಅವರು ಅನಾವರಣಗೊಳಿಸಿದರು. ಹಂಸಿನಿ ಭಿಡೆ ಹಾಗೂ ಬಳಗದಿಂದ ಸಂಸ್ಕೃತ ಗೀತಗಾಯನ ನಡೆಯಿತು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಪೃಥ್ವಿ ಹೆಗಡೆ ಪರಿಚಯಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ವಂದಿಸಿದರು. ಉಪಾಧ್ಯಕ್ಷೆ ವೈಷ್ಣವಿ ಭಟ್ ನಿರೂಪಿಸಿದರು.

Related posts

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನಾ ಸಮಾರಂಭ

Suddi Udaya

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಕಡಿರುದ್ಯಾವರದಲ್ಲಿ ಒಂಟಿಸಲಗ ದಾಳಿ : ಅಪಾರ ಕೃ‍ಷಿ ಹಾನಿ

Suddi Udaya

ಮಡಂತ್ಯಾರು ಜೆಸಿಐ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿಯವರ ಹುಟ್ಟುಹಬ್ಬದ ಪ್ರಯುಕ್ತ ಮಚ್ಚಿನ ಶಾಲೆಯಲ್ಲಿ ಗಿಡ ನೆಡುವುದರ ಮೂಲಕ ಆಚರಣೆ

Suddi Udaya

ಡಿ.25: ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ಹಂಸಗಿರಿ ವಠಾರದಲ್ಲಿ ‘ನಂದಿ ನಂದಿನಿ’ ಯಕ್ಷಗಾನ ಪ್ರದರ್ಶನ

Suddi Udaya

ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ (INSEF): ಉಜಿರೆ ಎಸ್.ಡಿ.ಎಮ್ ಶಾಲೆ, (ರಾಜ್ಯ ಪಠ್ಯಕ್ರಮ)ಯ ವಿದ್ಯಾರ್ಥಿಗಳಾದ ಅಧಿಶ್ ಬಿ.ಸಿ ಮತ್ತು ಆಲಾಪ್ ಎಂ ವಿಜ್ಞಾನದ ಸಂಶೋಧನೆ ಮಂಡಣೆ – ಗೌರವಾನ್ವಿತ ಪುರಸ್ಕಾರ

Suddi Udaya
error: Content is protected !!