ಗುಂಡೂರಿ: ಗುಡ್ಡ ಜರಿದು ಮನೆ ಬದಿಯಲ್ಲಿ ಬಿದ್ದ ಮಣ್ಣಿನ ರಾಶಿಯ ತೆರವು ಕಾರ್ಯ

Suddi Udaya

ಗುಂಡೂರಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಗುಂಡೂರಿ ಗ್ರಾಮದ ಹೊಸಬೆಟ್ಟು ಕೊಯಂದೂರು ನಿವಾಸಿ ದಿನೇಶ್ ಪೂಜಾರಿಯವರ ಮನೆಯ ಬದಿಗೆ ಗುಡ್ಡ ಜರಿದು ಬಿದ್ದ ಪರಿಣಾಮ ಮಣ್ಣಿನ ರಾಶಿ ತುಂಬಿತ್ತು.

ಕೂಡಲೇ ಶಾಸಕ ಹರೀಶ್ ಪೂಂಜರವರಿಗೆ ತಿಳಿಸಿದ್ದು ಶಾಸಕರು ಸಂಭಂದಪಟ್ಟವರಿಗೆ ಸೂಚನೆ ನೀಡಿ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿದೆ.

ಗ್ರಾಮ ಪಂಚಾಯತ್ ಆರಂಬೋಡಿಯ ಪಂ.ಅ.ಅಧಿಕಾರಿ, ಆಡಳಿತಾಧಿಕಾರಿಗಳಿಗೆ, ನಿಕಟಪೂರ್ವಧ್ಯಕ್ಷೆ ವಿಜಯಾ ಆರಂಬೋಡಿ, ಗುಂಡೂರಿ ವಾರ್ಡ್ ಪಂಚಾಯತ್ ಸದಸ್ಯರಿಗೆ ಹಾಗೂ ಶ್ರಮಿಸಿದ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ದಯಾನಂದ್ ನಡುಕುಮೇರು, ನಿತೀಶ್ ಗುಂಡೂರಿ ಯವರಿಗೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment

error: Content is protected !!