ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಸಾವ್ಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವಿನ ಅವಶೇಷ ಪತ್ತೆ: ಕೇರಳ ಮೂಲದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು

ಸಾವ್ಯ : ಇಲ್ಲಿಯ ನೂಜಿಲೋಡಿ ಎಂಬಲ್ಲಿ ನದಿಯ ಪಕ್ಕದಲ್ಲಿ ದನದ ಕರುವನ್ನು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ದನದ ಅವಶೇಷಗಳು ಹೂತು ಹಾಕಿದ ಬಗ್ಗೆ ಫೆ.4 ರಂದು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ವಿವರ: ಫೆ.05 ರಂದು ಸಾವ್ಯ ಗ್ರಾಮದ ನೂಜಿಲೋಡಿ ಎಂಬಲ್ಲಿ ಆಗ್ನೇಶ್ ಎಂಬವರ ದೂರಿನಂತೆ ನೆರೆ-ಮನೆಯ ವಿಜಯ ಹೆಗ್ಡೆ ಎಂಬವರ ಮನೆಯ ಅಂಗಳದಲ್ಲಿ ನಾಯಿಯೊಂದು ನದಿಬದಿಯಿಂದ ದನದಂತೆ ಕಾಣುವ ಯಾವುದೋ ಪ್ರಾಣಿಯ ಕಾಲನ್ನು ಬಾಯಿಯಲ್ಲಿ ಕಚ್ಚಿ ಎಳೆದುಕೊಂಡು ಬರುತ್ತಿದ್ದುದನ್ನು ಆಗ್ನೇಶ್ ತಂದೆ ಅಮ್ಮಿ ಪೂಜಾರಿ ಎಂಬವರು ನೋಡಿ ವಿಜಯ ಹೆಗ್ಡೆಯರಿಗೆ ಮಾಹಿತಿ ತಿಳಿಸಿ ಬಳಿಕ ವಿಜಯ ಹೆಗ್ಡೆಯವರೊಂದಿಗೆ ನದಿ ಬದಿಗೆ ತೆರಳಿ ನೋಡಲಾಗಿ ಪ್ರಾಣಿಯ ಅವಶೇಷಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದುದನ್ನು ಯಾವುದೋ ಪ್ರಾಣಿಗಳು ಕೆಡವಿರುವಂತೆ ಕಂಡುಬರುತ್ತಿದ್ದು, ನೂಜಿಲೋಡಿ ಮನೆಯಲ್ಲಿ ವಾಸವಿದ್ದ ಕೇರಳ ಮೂಲದ ವ್ಯಕ್ತಿಯ ಬಾಬ್ತು ಗಂಡು ಕರುವು ಈ ದಿನ ತೋಟದಲ್ಲಿ ಕಾಣಿಸದೇ ಇರುವುದರಿಂದ ಸದ್ರಿ ಜಾನುವಾರನ್ನು ಫೆ.04 ರಂದು ಕೇರಳ ಮೂಲದ ವ್ಯಕ್ತಿಯು ಮಾಂಸಕ್ಕಾಗಿ ಅಥವಾ ಇನ್ನಾವುದೋ ಉದ್ದೇಶದಿಂದ ಹತ್ಯೆ ಮಾಡಿ ಅವಶೇಷಗಳನ್ನು ನದಿ ಬದಿಯಲ್ಲಿ ಮಣ್ಣಿನಲ್ಲಿ ಹೂತುಹಾಕಿರುವ ಬಗ್ಗೆ ಶಂಕಿಸಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಕಣಿಯೂರು ಮಹಾಶಕ್ತಿಕೇಂದ್ರದ ಸಭೆ

Suddi Udaya

ಬೆಳ್ತಂಗಡಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಮುಂಡಾಜೆ: ಸೊಮಂತ್ತಡ್ಕ ನಿವಾಸಿ ಸಾವಿತ್ರಿ ನಿಧನ

Suddi Udaya

ಗೇರುಕಟ್ಟೆ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಾಯ

Suddi Udaya

ಗರ್ಡಾಡಿ: ಕುಂಡದಬೆಟ್ಟು ನಿವಾಸಿ ವೆಂಕಪ್ಪ ಮೂಲ್ಯ ನಿಧನ

Suddi Udaya
error: Content is protected !!