ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ಅರಸಿನಮಕ್ಕಿ: ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ಉತ್ತಮ ಕೆಲಸ ನೋಡಿ ಜೀವರಕ್ಷಕ ಪರಿಕರಗಳನ್ನು ಮಂಗಳೂರು ಫಿಶರೀಸ್ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಎಸ್ ಎಂ ಶಿವಪ್ರಕಾಶ್ ಕೊಡುಗೆಯಾಗಿ ನೀಡಿದ್ದಾರೆ.

ಲೈಫ್ ಬಾಯ್ಸ್, ಸೇಫ್ಟಿ ಜಾಕೆಟ್, 35ಮೀಟರ್ ನಯ್ಯಾನ್ ರೋಪ್ ನ್ನು ಹಿರಿಯ ಪರಿಸರವಾದಿ ದಿನೇಶ್ ಹೊಳ್ಳ ಇವರ ಮೂಲಕ ಶೌರ್ಯ ಸಂಘಕ್ಕೆ ತಲುಪಿಸಿದ್ದು ಶಿವಪ್ರಕಾಶ್ ರವರು ಅರಸಿನಮಕ್ಕಿ-ಶಿಶಿಲ ಶೌರ್ಯ ಘಟಕದ ಉತ್ತಮ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಪರಿಕರಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಅರಸಿನಮಕ್ಕಿ, ಶಿಶಿಲ, ಶಿಬಾಜೆ, ರೆಖ್ಯ ಸುತ್ತಮುತ್ತಲಿನ ಪರಿಸರದಲ್ಲಿ ವಿಪತ್ತು ಸಂಭವಿಸಿದಲ್ಲಿ ತಕ್ಷಣವೇ ಸಂಪರ್ಕಿಸಿ : 7348856538, 7795749020, 9482993241, 8762614272, 9449468643

Leave a Comment

error: Content is protected !!