ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25 ಸಾವಿರ ಸಹಾಯಧನ ವಿತರಣೆ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಶ್ರೀ ನಾಗವೇಣಿ ಸ್ವ-ಸಹಾಯ ಸಂಘದ ಸುನೀತಾ ರವರಿಗೆ ಕಾಲಿನ ರಕ್ತ ವಾತ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದು ಸದ್ರಿ ಕಾಯಿಲೆ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಪೂಜ್ಯ ಖಾವಂದರು ಮಂಜೂರು ಮಾಡಿದ್ದು.ರೂ 25,000 ಮೊತ್ತದ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಲಿತ ಮುಕ್ತೇಶರರಾದ ಶ್ರೀಯುತ ಶರತ್ ಕೃಷ್ಣ ಪಡುವೆಟ್ನಯರು ವಿತರಿಸಿದರು.


ಈ ಸಂದರ್ಭದಲ್ಲಿ ಉಜಿರೆ ಬೆಳಾಲು ಘಟಕದ ಸ್ವಯಂ ಸೇವಕರದ ಸುದೀರ್, ರವೀಂದ್ರ, ಸಂದೇಶ್, ರಾಘವೇಂದ್ರರವರು ಮೇಲ್ವಿಚಾರಕಿಯಾದ ಶ್ರೀಮತಿ ವನಿತ ಹಾಗೂ ಸೇವಾ ಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು.

Leave a Comment

error: Content is protected !!