ಇಂದಬೆಟ್ಟು: ಬಂಗಾಡಿ ಪರಿಸರದಲ್ಲಿ ನೆಟ್ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ

Suddi Udaya

ಇಂದಬೆಟ್ಟು: ಇಲ್ಲಿಯ ಬಂಗಾಡಿ ಬೆದ್ರಬೆಟ್ಟು ಕೂಡಂಗೆ, ಎರ್ಮಾಲ, ಪರಿಸರದಲ್ಲಿ ಒಂದು ವರ್ಷಗಳಿಂದ ನೆಟ್ವರ್ಕ್ ಸಮಸೈಯಿದ್ದು, ಬಂಗಾಡಿಯಲ್ಲಿ ಬಿಎಸ್ಎನ್ ಎಲ್ ಹಾಗೂ ಇಂದಬೆಟ್ಟುವಿನಲ್ಲಿ ಖಾಸಗಿ ಜಿಯೋ ಹಾಗೂ ಏರ್ಟೆಲ್ ಟವರ್ಗಳಿದ್ದು ,ತಿಂಗಳ ರೀಚಾರ್ಜ್ ಮಾಡದೆ ಇದ್ದರೆ‌ ಸೀಮ್ ಡೆಡ್ ಆಗುವ ಉದ್ದೇಶದಿಂದ ಕಂಪೆನಿಯವರು ಸಮರ್ಪಕ ನೆಟ್ವರ್ಕ್ಸ್ ನೀಡದೆ ಗ್ರಾಮಸ್ಥರ ಹಣವನ್ನು ದೊಚುತ್ತಿದ್ದಾರೆ.

ಇಲ್ಲಿ ಅಂಚೆ ಕಛೇರಿ, ಕೆನರಾ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ವ್ಯಾಪರಸ್ಥರಿಗೆ, ಉದ್ಯೋಗಿಗಳಿಗೆ ವ್ಯವಹಾರದ ಆನ್ ಲೈನ್ ಪೇ ಮಾಡುವುದಕ್ಕೆ ನೆಟ್ವರ್ಕ್ಸ್ ಸಮಸ್ಯೆಗಳಿಂದ ತೊಂದರೆಗಳಾಗುತ್ತಿದ್ದು ಅಗತ್ಯ ಕರೆ ಮಾಡಲು ಗುಡ್ಡ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಈ ಪರಿಸರದ ಗ್ರಾಹಕರಿಗಾಗುವ ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Comment

error: Content is protected !!