ಗುರುವಾಯನಕೆರೆ ರತ್ನಗಿರಿ ಅಮರ್ ಜಾಲ್ ರಸ್ತೆ ಚರಂಡಿ ಬದಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬ

Suddi Udaya

ಗುರುವಾಯನಕೆರೆ: ಇಲ್ಲಿಯ ರತ್ನಗಿರಿ ಅಮರ್ ಜಾಲ್ ಕಡೆ ಹೋಗುವ ರಸ್ತೆ ಚರಂಡಿ ಬದಿಯಲ್ಲಿ ವಿದ್ಯುತ್ ಕಂಬವೊಂದು ಅಪಾಯದ ಸ್ಥಿತಿಯಲ್ಲಿ ಇದೆ.
ಗುರುವಾಯನಕೆರೆ ಹವ್ಯಕ ಭವನದ ಬಳಿಯ ರತ್ನಾಗಿರಿಗೆ ಹೋಗುವ ರಸ್ತೆ ಚರಂಡಿ ಬದಿಯಲ್ಲಿ ಈ ವಿದ್ಯುತ್ ಕಂಬ ಇದ್ದು, ಕಂಬದ ಬುಡದಲ್ಲಿ ಮಣ್ಣು ಮಳೆ ನೀರಿಗೆ ಕರಗಿ ಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.


ಈ ರಸ್ತೆಯಲ್ಲಿ ನೂರಾರು ವಾಹನಗಳ ಓಡಾಟ ಹಾಗೂ ಜನ ಸಂಚಾರ ಇದ್ದು, ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಲು ಸಾವ೯ಜನಿಕರು ಆಗ್ರಹಿಸಿದ್ದಾರೆ.

Leave a Comment

error: Content is protected !!