July 24, 2026
ಪ್ರಮುಖ ಸುದ್ದಿ

ಬಂಟ್ವಾಳ ತಾಲೂಕು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬೆಂಚಿನಡ್ಕ – ಕಾಜಲ ಪರಿಸರದ ದಯನೀಯ ಸ್ಥಿತಿ:ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ನೈನಾಡು ಮತ್ತು ಬೆಳ್ತಂಗಡಿ ತಾಲೂಕಿನ ಕಾಜಲ ಪ್ರದೇಶ ಕ್ಕೆ ಸಂಪರ್ಕ ರಸ್ತೆ ಯ ಮಧ್ಯೆ ತೊರೆಯೊಂದು ಹರಿಯುತ್ತಿದ್ದು ಇದಕ್ಕೆ ಸೇತುವೆ ನಿರ್ಮಾಣ ಮಾಡಲು ಬಹಳಷ್ಟು ಕಾಲದಿಂದ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಾಡಿರುವ ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಈ ಭಾಗದ ಜನರದ್ದು. ಪ್ರತಿ ನಿತ್ಯ ಸರ್ಕಾರಿ ಪ್ರೌಢಶಾಲೆ
ಕಿರಿಯ ಪ್ರಾಥಮಿಕ ಶಾಲೆಅಂಗನವಾಡಿ ಕೇಂದ್ರ ಗಳಿಗೆ ಮಕ್ಕಳು ,.ಹಾಲು ಉತ್ಪಾದಕ ರೈತರು ಇದೇ ದಾರಿಯಲ್ಲಿ ಡಿಪೋ ಗಳಿಗೆ .ಇದೇ ದಾರಿಯಾಗಿ ಬರಬೇಕು

ಶಾಲಾ ವಿದ್ಯಾರ್ಥಿಗಳು ಸೇರಿ ನೂರಾರು ಜನರು ಈ ಕಿರು ದಾರಿಯಲ್ಲೇ ಸಾಗಬೇಕಾಗಿದೆ. ಇದರ ಹೊರತಾಗಿ ಮಾರ್ಗ ವನ್ನು ಅವಲಂಬಿಸಿ ಬರಬೇಕಾದರೆ ಪುರಿಯ, ಪುಂಜಾಲಕಟ್ಟೆ, ಮೂರ್ಜೆ, ದಾರಿಯಾಗಿ ನೈನಾಡಿಗೆ ಸುಮಾರು 15 ಕೀ ಮೀ ಸುತ್ತಿ ಬರಬೇಕು. ಮಳೆಗಾಲದಲ್ಲಿ ತೊರೆ ತುಂಬಿ ಹರಿದಾಗ ಮಕ್ಕಳಾದಿಯಾಗಿ ಜನರೆಲ್ಲರೂ ನೀರು ಇಳಿಯುವ ತನಕ ಕಾದು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ. ಏನಾದರೂ ಆಕಸ್ಮಿಕ, ಸಂಭವಿಸಿದರೆ ದೇವರೆ ಗತಿ. ಕಾಜಲ ದ ಅಸು ಪಾಸಿನ ಜನತೆಯ ಕೂಗು ಅರಣ್ಯ ರೋಧನ ವಾಗಿದೆ
ಇವತ್ತು ವಯೋ ವೃದ್ಧರೋರ್ವರು ಮರಣ ಹೊಂದಿದ್ದು, ಅವರ ಅಂತ್ಯಕ್ರಿಯೆ ನಡೆಸಲು ದೇಹವನ್ನು ಸರಿ ಸುಮಾರು ಒಂದು ಕಿಲೋಮೀಟರ್ ದೂರದ ತನಕ ಹೊತ್ತು ತಂದು ನಂತರ ಅಂಬ್ಯುಲೆನ್ಸ್ ಮುಖೇನ ಸ್ಮಶಾನ ಕ್ಕೆ ಸಾಗಿಸಲಾಯಿತು. ತುಂಬಿ ಹರಿಯುತ್ತಿರುವ ತೊರೆಯ ಮೇಲಿನ ಕಿಂಡಿ ಅಣೆಕಟ್ಟಿನ ಕಿರು ದಾರಿಯಲ್ಲಿ ಬಹಳ ಪ್ರಯಾಸಪಟ್ಟು ಮರಣವನ್ನು ಹೊತ್ತು ಕೊಂಡು ಬರಬೇಕಾದ ದೃಶ್ಯ ಮೂಲಭೂತ ಸೌಕರ್ಯಗಳ ಕುಂದುಕೊರತೆ ಗೆ ಜ್ವಲಂತ ಸಾಕ್ಷಿಯಾಗಿತ್ತು

Related posts

ಪುತ್ತೂರು ಪೊಲೀಸರಿಂದ ಸಾವಿರಾರು ರೂ.ಮೌಲ್ಯದ ಅಕ್ರಮ ಗಾಂಜಾ ಸಾಗಾಟ ಪತ್ತೆ: 106 ಕಿ.ಗ್ರಾಂ ಗಾಂಜಾ ಸಹಿತ ಚಾಮಾ೯ಡಿಯ ಅಬ್ದುಲ್ ಸಾದಿಕ್ ಹಾಗೂ ರಫೀಕ್ ಬಂಧನ

Suddi Udaya

ಪುದುವೆಟ್ಟು: ಅಕ್ರಮ ಮರಳು ಅಡ್ಡೆ‌ಗೆ ಧರ್ಮಸ್ಥಳ ಪೊಲೀಸ್ ದಾಳಿ

Suddi Udaya

ವಿಶಿಷ್ಟ ರೀತಿಯಲ್ಲಿ ಸಮಾಜಕ್ಕೆ ಮಾದರಿಯಾದ ನವ ಜೋಡಿಗಳು

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟ: ಮುಂಡಾಜೆಯ ತೇಜಲ್ ಕೆ.ಆರ್. ರವರಿಗೆ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ

Suddi Udaya

ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್.ಐ.ಟಿ; 14 ದಿನಗಳ ನ್ಯಾಯಾಂಗ ಬಂಧನ

Suddi Udaya
error: Content is protected !!