ಬೆಳ್ತಂಗಡಿ: ಹಳೇಕೋಟೆಯ ವಾಣಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಕಬ್ಬಡಿ ತಂಡವು ಬೆಳ್ತಂಗಡಿ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪಂದ್ಯಾವಳಿಯಲ್ಲಿ ವಾಣಿ ಕಾಲೇಜಿನ ಬಾಲಕಿಯರ ತಂಡವು ಉತ್ತಮ ತಂಡದ ಸಮನ್ವಯ, ಕ್ರೀಡಾ ಮನೋಭಾವ ಹಾಗೂ ಆತ್ಮವಿಶ್ವಾಸದಿಂದ ಸ್ಪರ್ಧಿಸಿ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಬಾಲಕಿಯರ ವಿಭಾಗದಿಂದ ಕುಮಾರಿ ವೈಷ್ಣವಿ ಕೆ. ಪೂಜಾರಿ ಹಾಗೂ ಕುಮಾರಿ ಹಂಷಿತ ಅವರು ಮುಂದಿನ ಹಂತದ ಆಯ್ಕೆಗಾಗಿ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಿಂದಲೂ ಓರ್ವ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.
ತಂಡಕ್ಕೆ ಪದ್ಮರಾಜ್ ಅವರು ತರಬೇತುದಾರರಾಗಿ ಮಾರ್ಗದರ್ಶನ ನೀಡಿದ್ದು, ಬೆಳಿಯಪ್ಪ ಕೆ. ಅವರು ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.












