ಲಾಯಿಲ :ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ವಾರ್ಷಿಕ ಸಭೆಯು ಶ್ರೀ ವಿಘ್ನೇಶ್ವರ ಕಲಾ ಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಶಶಿಕುಮಾರ್ ಅಯೋಧ್ಯನಗರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಿತಿಯ ಕಾರ್ಯದರ್ಶಿಗಳಾದ ಗಣೇಶ್ ಆರ್ ಸಮಿತಿಯ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು. ಕೋಶಾಧಿಕಾರಿ ಸುಜಿತ್ ಗುರಿಂಗಾನ ಕಳೆದ ಸಾಲಿನ ಲೆಕ್ಕಾಚಾರ ಮಂಡಿಸಿದರು.
ಸಮಿತಿಯ ನೂತನ ಅಧ್ಯಕ್ಷರಾಗಿ ಗುರು ( ಚಂದ್ರಕಾಂತ್) ಅಜೆಕಲ್ಲು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಆರ್ ರಾಘವೇಂದ್ರ ನಗರ, ಕೋಶಾಧಿಕಾರಿಯಾಗಿ ಶ್ರದ್ದೇಶ್ ಲಾಯಿಲ, ಕಾರ್ಯದರ್ಶಿಯಾಗಿ ಅಜಯ್ ಶಿವಾಜಿನಗರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರವಿಂದ್ ಕುಮಾರ್ ರಾಘವೇಂದ್ರ ನಗರ , ಕ್ರೀಡಾಕಾರ್ಯದರ್ಶಿಯಾಗಿ ರವಿಚಂದ್ರ ನಾಡೇಂದ್ರ, ಉಪಾಧ್ಯಕ್ಷರಾಗಿ ಚಿನ್ಮಯ ಕುಲಾಲ್ ಪುತ್ರಬೈಲ್, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ರಾಘವೇಂದ್ರನಗರ, ಜೊತೆ ಕೋಶಾಧಿಕಾರಿಯಾಗಿ ಮೇಘರಾಜ್ ಪುತ್ರಬೈಲ್, ಜೊತೆ ಕ್ರೀಡಾಕಾರ್ಯದರ್ಶಿಯಾಗಿ ನಾಗೇಶ್ ಹೆಗ್ಡೆ, ಅನ್ನದಾನ ಸಮಿತಿಯ ಸಂಚಾಲಕರಾಗಿ ಸುರೇಶ್ ರಾಘವೇಂದ್ರ ನಗರ, ಹರಿಕೃಷ್ಣ ಆಯ್ಕೆಯಾದರು.