ಉದ್ಯಮಿ ಒಕ್ಕಲಿಗ ಸಂಸ್ಥೆ ಮಂಗಳೂರಿನಲ್ಲಿ ಶುಭಾರಂಭ

Suddi Udaya

ಬೆಳ್ತಂಗಡಿ: ಉದ್ಯಮಿ ಒಕ್ಕಲಿಗ ಸಂಸ್ಥೆ ಕಳೆದ 2 ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೂ ಈಗ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ.

ಕಳೆದ ವರ್ಷದಲ್ಲಿ ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಸಿ ಒಕ್ಕಲಿಗರನ್ನು ಉದ್ಯಮ ಕ್ಷೇತ್ರದಲ್ಲಿ ಬೆಳೆಸಲು ಈ ಸಂಸ್ಥೆ ಶ್ರಮವಹಿಸುತ್ತಿದೆ. ಒಕ್ಕಲಿಗರು ನಡೆಸಿದ ಉದ್ಯಮವನ್ನು ಬೇರೆ ಬೇರೆ ಸ್ಥಳಗಳಿಗೆ ವಿಸ್ತರಿಸಲು ಸಂಸ್ಥೆ ಸಹಕರಿಸುತ್ತಿದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ಆನಂದ ಪಿ. ಹೆಚ್ ನೆರಿಯ, ಕಾರ್ಯದರ್ಶಿ ಸುಂದರ ಗೌಡ ಕೊಕ್ಕಡ, ಜೊತೆ ಕಾರ್ಯದರ್ಶಿ ಗಣೇಶ್ ಗೌಡ ಕಲಾಯಿ, ಕೋಶಾಧಿಕಾರಿ ಸುಂದರ ಗೌಡ ಬೈಕಂಪಾಡಿ, ಗೌರವ ಅಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಬಾಲಕೃಷ್ಣ ಡಿ. ಬಿ, ಲೋಕಯ್ಯ ಗೌಡ, ಕಿರಣ್ ಬುಡ್ಲೆ ಗುತ್ತು, ಗುರುದೇವ, ಸುರೇಶ ಬೈಲು, ರಕ್ಷಿತ್ ಪುತ್ತಿಲ, ಸುನಿಲ್ ಕೇನಡ್ಕ, ಸಾಂತಪ್ಪ ಕಡಬ, ಮಹೇಶ್ ನಡುತೋಟ ಉಪಸ್ಥಿತರಿದ್ದರು.

Leave a Comment

error: Content is protected !!