ಕಲ್ಮಂಜ ಸತ್ಯನಪಲ್ಕೆ ಹಾ.ಉ. ಮಹಿಳಾ ಸಹಕಾರಿ ಸಂಘ ಉದ್ಘಾಟನೆ

Suddi Udaya

ಕಲ್ಮಂಜ : ಇಲ್ಲಿಯ ಸತ್ಯನಪಲ್ಕೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಜು.11 ರಂದು ಸತ್ಯನಪಲಿಕೆ ಸಂಘದ ವಠಾರದಲ್ಲಿ ಮೋಹನ್ ರಾವ್ ಕಲ್ಮಂಜ ಅವರ ಮುತುವರ್ಜಿಯಲ್ಲಿ ನಡೆಯಿತು.


ಉದ್ಘಾಟನಾ ಸಮಾರಂಭವನ್ನು ಮಂಗಳೂರು ದಕ್ಷಿಣ ಕನ್ನಡ ಸಹಕಾರಿ‌ ಹಾಲು‌ ಒಕ್ಕೂಟ(ನಿ.) ಅಧ್ಯಕ್ಷೆ ಕೆ.ಪಿ.‌ ಸುಚರಿತ ಶೆಟ್ಟಿ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ.ಸ.ಹಾಲು ಒಕ್ಕೂಟ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ಮಂಗಳೂರು ದ.ಕ.ಸ.ಹಾಲು ಒಕ್ಕೂಟ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್ ಕೆ.‌ , ಶ್ರೀಮತಿ ಸವಿತಾ ಎನ್.ಶೆಟ್ಟಿ, ಮಂಗಳೂರು ದ.ಕ.ಸ.ಹಾಲು ಒಕ್ಕೂಟ ವ್ಯವಸ್ಥಾಪಕರಾದ ವಿವೇಕ್ ಡಿ. , ಡಾ.ರವಿರಾಜ ಉಡುಪ , ಸತೀಶ್ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಕಾಶ್ ಭಟ್ ಮಾಣಿಂಜೆ ಸ್ವಾಗತಿಸಿ, ಧನ್ಯವಾದವಿತ್ತರು. ಶ್ರೀಮತಿ ವಸಂತಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!