25.7 C
ಪುತ್ತೂರು, ಬೆಳ್ತಂಗಡಿ
March 7, 2026
ಜಿಲ್ಲಾ ಸುದ್ದಿಪ್ರಮುಖ ಸುದ್ದಿ

ಕಲ್ಲಿನ ಕೋರೆಗೂ ನನಗೂ ಸಂಬಂಧವಿಲ್ಲ ಬೆಳ್ತಂಗಡಿ ಮಾರಿ ಗುಡಿಯಲ್ಲಿ ಶಶಿರಾಜ್ ಶೆಟ್ಟಿ ಪ್ರಮಾಣ

ಬೆಳ್ತಂಗಡಿ: ಮೇಲಂತಬೆಟ್ಟು ಬಳಿ ಕಲ್ಲಿನಕೋರೆ ದಾಳಿ ವೇಳೆ ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಸೇರಿಸಿ ಕೇಸ್ ದಾಖಲಿಸಿ ಜೈಲಿಗಟ್ಟಿದವರಿಗೆ ಬೆಳ್ತಂಗಡಿ ಮಾರಿಗುಡಿಯ ತಾಯಿ ಮಹಮ್ಮಾಯಿ ಶಿಕ್ಷೆ ನೀ ಡಲಿ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರು ಜುಲೈ 12 ರಂದು ಬೆಳ್ತಂಗಡಿ ಮಹಮ್ಮಾಯಿ ದೇವಸ್ಶಾನದಲ್ಲಿ ಪ್ರಾರ್ಥಿಸಿದರು.
ಕಳೆದ 2 ತಿಂಗಳ ಹಿಂದೆ ಮೇಲಂತಬೆಟ್ಟು ಸಮೀಪ ತಹಶೀಲ್ದಾರ್ ನೇತೃತ್ವದಲ್ಲಿ ಕಲ್ಲಿನ ಕೋರೆಗೆ ದಾಳಿ ನಡೆಸಿ ನಂತರ ಉದ್ದೇಶಪೂರ್ವಕವಾಗಿ ನನ್ಮ ಹೆಸರನ್ನು ಸೇರಿಸಿ ತೇಜೋವಧೆ ಮಾಡಿದ್ದಾರೆ ರಕ್ಷಿತ್ ಶಿವರಾಂ ಒತ್ತಡಕ್ಕೆ ಮಣಿದು ಪೊಲೀಸರು ರಾತ್ರೋರಾತ್ರಿ ನನ್ನನ್ನು ಬಂಧಿಸಿದ್ದಾರೆ. ಅದಲ್ಲದೇ ಸುಮಾರು 27 ದಿನ ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ. ಈ ಕಲ್ಲಿನ ಕೋರೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ತಾಯಿ ಮುಂದೆ ಪ್ರಮಾಣ ಮಾಡುತಿದ್ದೇನೆ. ನನ್ನನ್ನು ಈ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಒತ್ತಡ ಹಾಕಿದ  ರಕ್ಷಿತ್ ಶಿವರಾಂ ಹಾಗೂ ಇದರ ಹಿಂದೆ ಷಡ್ಯಂತ್ರ ಹೂಡಿದ ಎಲ್ಲರಿಗೂ ತಾಯಿ ಮಹಮ್ಮಾಯಿ ಶಿಕ್ಷೆ ನೀಡಲಿ. ಎಂದು ಪ್ರಾರ್ಥಿಸಿದರು. ಈ ಪ್ರಮಾಣದ ವೇಳೆ ಶಾಸಕ ಹರೀಶ್ ಪೂಂಜ ಯುವ ಮೋರ್ಚಾ ,ಉಪಾಧ್ಯಕ್ಷ ಗಣೇಶ್ ಲಾಯಿಲ ಸಿ.ಎ.‌ಬ್ಯಾಂಕ್ ನಿರ್ದೇಶಕ ರಮೇಶ್ ನಲಿಕೆ,ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿಠಲ ಆಚಾರ್ಯ ಗುರುವಾಯನಕೆರೆ,ಯುವ ಮೋರ್ಚಾ  ಕಾರ್ಯದರ್ಶಿ ಹರೀಶ್ ಗೌಡ ಸಂಬೋಳ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಕನ್ನಾಜೆ, ನ.ಪಂ ಸದಸ್ಯ ಶರತ್ ಕುಮಾರ್, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಗುರು ಲಾಯಿಲ.ಹಾಗೂ ಇತರರು ಉಪಸ್ಥಿತರಿದ್ದರು.

Related posts

ದೇವನಗುಲ್‌ ಚಾರ್ಮಾಡಿ ಅಡ್ಡ ರಸ್ತೆಗೆ ಗೇಟ್‌ – ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬಳೆಂಜ: ಕಾಪಿನಡ್ಕದಲ್ಲಿ ಪ್ರವಾಸಿಗರ ಕಾರು ಧರೆಗೆ ಡಿಕ್ಕಿ; ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಗಾಯ

Suddi Udaya

ಬೆಳ್ತಂಗಡಿ‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ: 36 ಮಂದಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Suddi Udaya

ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ ಹೀಗೊಂದು ವಿನೂತನ ಶೌಚಾಲಯ

Suddi Udaya

ಕಾಶಿಬೆಟ್ಟುನಲ್ಲಿ ರಸ್ತೆ ಮಧ್ಯೆ ಕೈಕೊಟ್ಟ ಟ್ರಕ್: ತಾಸುಗಟ್ಟಲೆ ವಾಹನ ಬ್ಲಾಕ್

Suddi Udaya
error: Content is protected !!