ರಾಜ್ಯದ “ಅನ್ನಭಾಗ್ಯ ಯೋಜನೆ” ಯ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದಿಲ್ಲ: ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ರವರ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಬೆಳ್ತಂಗಡಿ : ರಾಜ್ಯದ “ಅನ್ನಭಾಗ್ಯ ಯೋಜನೆ” ಯ ಹಣ ಕಳೆದ ಮೂರು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, “ಅನ್ನಭಾಗ್ಯ ಯೋಜನೆ” ಯ ಅನುಷ್ಠಾನಕ್ಕೆ ಪದೇಪದೇ ತಾಂತ್ರಿಕ ಅಂಶಗಳು ಕಾರಣಗಳೇನು? ಎಂದು ವಿಧಾನಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಹಾಗೂ ಕಾನೂನು ಮಾಪನ ಸಚಿವರಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಹಾಗೂ ಕಾನೂನು ಮಾಪನ ಸಚಿವ ಕೆ.ಎಸ್ ಮುನಿಯಪ್ಪ ರವರು ಅನ್ನಭಾಗ್ಯ DBT ಯೋಜನೆಗೆ ಸಂಬಂಧಿಸಿದಂತೆ ಮೇ – 2024 ರ ಮಾಹೆಯವರೆವಿಗೂ ಅರ್ಹ ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸಲಾಗಿರುತ್ತದೆ. ಹಾಗೂ ಜೂನ್ 2024 ರ ಮಾಹೆಯ DBT ಹಣ ವರ್ಗಾವಣೆ ಕಾರ್ಯ ಪ್ರಗತಿಯಲ್ಲಿರುತ್ತದೆ. K2 ಮತ್ತು DBT ತಂತ್ರಾಂಶದಲ್ಲಿ ಕೆಲವು ಬದಲಾವಣೆಗಳನ್ನು ತಂದ ಹಿನ್ನೆಲೆಯಲ್ಲಿ ಏಪ್ರಿಲ್ 2024 ರ ಮಾಹೆಯ DBT ಹಣ ವರ್ಗಾವಣೆ ಕಾರ್ಯ ಸ್ವಲ್ಪ ವಿಳಂಬವಾಗಿರುತ್ತದೆ. ನಂತರ DBT ಹಣ ವರ್ಗಾವಣೆ ಕಾರ್ಯದಲ್ಲಿ ಅಡ್ಡಿ ಯಾಗಿರುವುದಿಲ್ಲ ಎಂದು ಉತ್ತರಿಸದಿರು.

Leave a Comment

error: Content is protected !!