ನಾಲ್ಕೂರು: ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ, ತುಂಡಾಗಿ ಬಿದ್ದ ವಿದ್ಯುತ್ ಕಂಬ: ತೆರವು ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು ಭಾಗಿ

Suddi Udaya

ಬಳಂಜ: ಕಳೆದ ಹಲವಾರು ವಾರಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಪ್ರಕೃತಿ ವಿಕೋಪಗಳು ನಡೆಯುತ್ತಿದ್ದು ಇಂದು(ಜು.24) ಸುರಿದ ಬಿರುಗಾಳಿ ಮಳೆಗೆ ನಾಲ್ಲೂರು ನಿಟ್ಟಡ್ಕದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ವಿದ್ಯುತ್ ಕಂಬವೊಂದು ತುಂಡಾಗಿದೆ.

ಇದನ್ನು ತೆರವುಗೊಳಿಸಲು ಗ್ರಾಮಸ್ಥರಾದ ಸುನೀಲ್ ಶೆಟ್ಟಿ, ಸದಾನಂದ ತೋಟದಪಲ್ಕೆ, ಗ್ರಾ. ಪಂ ಸದಸ್ಯರಾದ ರವೀಂದ್ರ ಬಿ.ಅಮೀನ್,ವಿದ್ಯುತ್ ಲೈನ್ ಮ್ಯಾನ್ ಜಟ್ಟಿಂಗ ಮುಂತಾದವರು ಭಾಗವಹಿಸಿದ್ದರು.

Leave a Comment

error: Content is protected !!