ಬಿರುಗಾಳಿ: ಹಲೇಜಿ -ಕಲಾಯಿಯಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳು ಹಾಗೂ ನಾಲ್ಕು ಕರೆಂಟ್ ಕಂಬಗಳು ಧಾರಾಶಾಹಿ

Suddi Udaya

ಉರುವಾಲು: ಜು.24 ರಂದು ರಾತ್ರಿ ಬೀಸಿದಂತಹ ಬಿರುಗಾಳಿಗೆ ಹಲೇಜಿ ನಿವಾಸಿಯಾದ ಸುಭಾಸ್ ಕೆ. ಏನ್ ಇವರ ತೋಟದಲ್ಲಿ ಸುಮಾರು 35 ಅಡಿಕೆ ಗಿಡ ಹಾಗೂ ಒಂದು ತೆಂಗಿನ ಮರ ಮುರಿದುಬಿದ್ದಿದೆ.

ಹತ್ತಿರದ ಗುಡ್ಡದ ದೊಡ್ಡ ದೊಡ್ಡ ಮರಗಳು ಬಿದ್ದು ಸುಮಾರು ನಾಲ್ಕು ಕರೆಂಟ್ ಕಂಬಗಳು ಧಾರಾಶಾಹಿಯಾಗಿದೆ.
ಹಲೇಜಿ- ಕಲಾಯಿ ಪ್ರದೇಶದ ಕೆಲವು ಮನೆಗಳಿಗೆ ಎರಡು ದಿನದಿಂದ ವಿದ್ಯುತ್ ಸಂಪರ್ಕವೇ ಇಲ್ಲ.
ಹಲೇಜಿ -ಕಲಾಯಿಯಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿದೆ.

Leave a Comment

error: Content is protected !!