ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ : ಜಿ.ಎ.ಎಸ್. ಕಂಬದಲ್ಲಿ ಢಮರ್ ಶಬ್ದ

ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಯ,ನ್ಯಾಯತರ್ಪು ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಆಗುತ್ತಿದೆ. ಜಿ.ಎ.ಎಸ್.ಕಂಬದಲ್ಲಿ ಢಮರ್ ಎಂಬ ದೊಡ್ಡ ಗಾತ್ರದ ಶಬ್ದ. ಜು.26 ರಂದು ಆಗಾಗ ಕೇಳಿಸುವಾಗ ಸಾರ್ವಜನಿಕರನ್ನೂ ಬೆಚ್ಚಿ ಬೀಳಿಸುಂತಿದೆ. ಮತ್ತು ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಇದೆ ಭಾವಿಸಲಾಗುತ್ತದೆ.


ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವುದು ಸರ್ವೇಸಾಮಾನ್ಯವಾಗಿದೆ. ಅದರೆ ಇಲ್ಲಿಯ ಸಮಸ್ಯೆಗಳು ಹಲವಾರು ಇದೆ. ಕಳೆದ ವರ್ಷದಿಂದ ಈ ತನಕ ಕೆಲವೊಂದು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಮತ್ತು ತಂತಿಗಳಿಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ತರೆವುಗೊಳಿಸದೆ ಮತ್ತು ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಜಾವಬ್ದಾರಿ ಎದ್ದು ಕಾಣುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಗೇರುಕಟ್ಟೆ ಮಂಜಲಡ್ಕ ಕ್ರಾಸ್ ರಸ್ತೆಯ ಪಕ್ಕದಲ್ಲಿ ಅಂಗಾರಬೆಟ್ಟು ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ತಂತಿಗಳಿಗೆ ಅಳವಡಿಸಿದ ಗ್ಲಾಸು ಮುರಿದು 3-4 ತಿಂಗಳ ಹಿಂದೆ ಆಗಿದೆ. ಕಂಬದಿಂದ ತಂತಿ ಬೇರ್ಪಟ್ಟ ಸುಮಾರು 6 ರಿಂದ 8 ಅಡಿ ದೂರ ಸರಿದು ಸದ್ಯ ಪಕ್ಕದಲ್ಲಿರುವ ಮರದ ಕೊಂಬೆಗಳ ಅಧಾರದಲ್ಲಿ ನಿಂತಿರುತ್ತದೆ. ಹಾಗೂ ಅದರಲ್ಲಿ ವಿದ್ಯುತ್ ಸಂಚಾರವಿರುವುದನ್ನು ಗಮನಿಸಿದಾಗ ಮೈ ಝಮೇನಿಸುತ್ತದೆ.ಶಾಲಾ ಮಕ್ಕಳು, ಕೃಷಿಕರು ಇದೇ ರಸ್ತೆಯಲ್ಲಿ ಓಡಾಡುವುದು ಅನಿವಾರ್ಯವಾಗಿದೆ.
ಈ ಬಗ್ಗೆ ಸ್ಥಳೀಯರು ಸಿಬ್ಬಂದಿಗಳಿಗೆ ತಿಳಿಸಿದರು ಕ್ಯಾರೆ ಮಾಡುವುದಿಲ್ಲ.ಜೀವ ಬಲಿಪಡೆದ ನಂತರದಲ್ಲಿ ಸರಿಪಡಿಸುವ ಮನೋಭಾವನೆ ಇರಬಹುದಾ..?


ಪರಪ್ಪು- ಕೊಯ್ಯೂರು ಕ್ರಾಸ್ ಬಟ್ಟೆಮಾರು ರಸ್ತೆಯ ಪಕ್ಕದಲ್ಲಿ ಟ್ರಾನ್ಸ್ ಫಾರ್ಮ್ ಪೆಟ್ಟಿಗೆ ಯಿಂದ ಹಾದು ಹೋಗುವ ಎಲ್ಲಾ ತಂತಿಗಳು ಪಕ್ಕದ ಮರ,ಬಳ್ಳಿಗಳ ಆಶ್ರಯ ಪಡೆದು ಕೊಂಡಿದೆ.ಅದರಲ್ಲಿ ಆಗಾಗ ಬೆಂಕಿ ಕಾಣಿಸಿಕೊಂಡಾಗ ಭಯವಾಗುತ್ತದೆ ಎಂದು ಪಕ್ಕದ ಮನೆಯವರು ಹಾಗೂ ಸಾರ್ವಜನಿಕ ಹೇಳುತ್ತಾರೆ..ಕೆಲವೇ ತಿಂಗಳ ಹಿಂದೆ ಬೈಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ನೆನೆಪು ಇನ್ನೂ ಮಾಸಿಲ್ಲ. ಮೆಸ್ಕಾಂ ಇಲಾಖೆಯವರು ಸಾರ್ವಜನಿಕರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸುತ್ತಾರೆ.ತಪ್ಪಿದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ,ಶಾಸಕರ ಹಾಗೂ ಸಂಸದರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ ಎಚ್ಚರಿಸಿದ್ದಾರೆ.


ಈ ಹಿಂದೆ ಪತ್ರಿಕೆ, ವೆಬ್ ಸೈಟ್ ಗಳಲ್ಲಿ ವರದಿ ಪ್ರಕಟವಾದ ನಂತರದಲ್ಲಿ ಕಾಟಾಚಾರಕ್ಕೆ ಸ್ವಲ್ಪಮಟ್ಟಿಗೆ ಕೃಷಿಕರ ಮತ್ತು ಸಾರ್ವಜನಿಕರ ಸಹಾಯದಿಂದ ಮರದ ಕೊಂಬೆ ತೆರವು ಕೆಲಸ ಆಗಿದೆ.
ವರದಿ: ಕೆ.ಎನ್ ಗೌಡ

Related posts

ಮುಳಿಯ ಗೋಲ್ಡ್ & ಡೈಮಂಡ್ಸ್‌: ಡಿ.27ರಿಂದ ಜ.5ರ ವರೆಗೆ ವರ್ಷಾಂತ್ಯದ ಮಾರಾಟ: ಶೇ 50ರ ವರೆಗೆ ವಿಎ ಕಡಿತ; ಹಳೆಯ ಆಭರಣಗಳ ವಿನಿಮಯಕ್ಕೆ ಅವಕಾಶ

Suddi Udaya

ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ.93.47 ಫಲಿತಾಂಶ

Suddi Udaya

ಲಾಯಿಲ: ಶ್ರೀ ಗಾಯತ್ರೀ ವಿಶ್ವಕರ್ಮ ಮಹಿಳಾ ಸಂಘದಿಂದ ಶ್ರೀ ಕಾಳಿಕಾಂಬಾ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ರಜತ ಮಹೋತ್ಸವ ಸಂಭ್ರಮ

Suddi Udaya

ಚಾತುರ್ಮಾಸ್ಯ ವ್ರತದಲ್ಲಿರುವ ಕ‌ನ್ಯಾಡಿ ಶ್ರೀರಾಮ‌ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಉತ್ತರಕನ್ನಡ ಹಲಿಯಾಳ ಕ್ಷೇತ್ರದ ಶಾಸಕ, ಕರ್ನಾಟಕ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ

Suddi Udaya

ಅಳದಂಗಡಿ ಒಕ್ಕೂಟದ ಪದಾಧಿಕಾರಿಗಳ ಸಭೆ

Suddi Udaya
error: Content is protected !!