ಗೇರುಕಟ್ಟೆ: ಪ್ರಗತಿಪರ ಕೃಷಿಕ ಕಲ್ಕುರ್ಣಿ ಪೆರ್ನು ಗೌಡ ನಿಧನ

Suddi Udaya

ಗೇರುಕಟ್ಟೆ : ಕಳಿಯ ಗ್ರಾಮದ ಕಲ್ಕುರ್ಣಿ ನಿವಾಸಿ ಪ್ರಗತಿಪರ ಕೃಷಿಕ ಪೆರ್ನು ಗೌಡ (84 ವ) ಜು.27 ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಬೊಳ್ಳುಕಲ್ಲು ಸರಕಾರಿ ಕಿ.ಪ್ರಾ.ಶಾಲೆ ಮತ್ತು ಎರುಕಡಪ್ಪು ಅಂಗನವಾಡಿ ಕೇಂದ್ರ (ವಿದ್ಯಾ ಸಂಸ್ಥೆಗಳನ್ನು) ಸ್ಥಾಪಿಸುವಲ್ಲಿ ಶ್ರಮಿಸಿ, ಸ್ಥಾಪಕಾಧ್ಯಕ್ಷರಾಗಿ,ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಜಿನ್ನಮ್ಮ, ಮೂವರು ಪುತ್ರರು, ಮೂವರು ಪುತ್ರಿಯರು,ಸೊಸೆಯಂದಿರು,ಆಳಿಯಂದಿರು,ಮೊಮ್ಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!