ಜೇಸಿಐ ವಲಯ 15ರ ತಾತ್ಕಾಲಿಕ ವಲಯ ತರಬೇತುದಾರರಾಗಿ ಚಂದ್ರಹಾಸ ಬಳಂಜ ಆಯ್ಕೆ

Suddi Udaya

ವ್ಯಕ್ತಿತ್ವ ವಿಕಸನಕ್ಕೆ ಹೆಸರಾದ ಅಂತರಾಷ್ಟ್ರೀಯ ಸಂಸ್ಥೆ ಜೇಸಿಐನ ವಲಯ 15 ರ ವಲಯ ತರಬೇತುದಾರರ ತರಬೇತಿ ಕಾರ್ಯಗಾರ ಜುಲೈ 18 ರಿಂದ 21 ರ ತನಕ ಜೇಸಿಐ ಕಾಪುವಿನ ಆತಿಥ್ಯದಲ್ಲಿ ಕಾಪುವಿನಲ್ಲಿ ನಡೆದಿದ್ದು ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾದ ಚಂದ್ರಹಾಸ ಬಳಂಜ ಭಾಗವಹಿಸಿ ಉತ್ತೀರ್ಣರಾಗಿ ತಾತ್ಕಾಲಿಕ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಗೋವಾ, ಆಂಧ್ರಪ್ರದೇಶ, ಕೇರಳ ಹೀಗೆ ವಿವಿಧ ಕಡೆಯಿಂದ ಜೇಸಿಐ ಸದಸ್ಯರು ಇದರಲ್ಲಿ ಭಾಗವಹಿಸಿದ್ದು ಇದು ಜೇಸಿಐ ನ ಅತ್ಯುತ್ತಮ ತರಬೇತಿ ಕಾರ್ಯಗಾರದಲ್ಲಿ ಒಂದಾಗಿದೆ.


ಜೇಸಿಐನ ಸಕ್ರೀಯ ಸದಸ್ಯರಾಗಿರುವ ಇವರು ಇದರೊಂದಿಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕ್ಕೊಂಡಿದ್ದಾರೆ.

ಪುಣ್ಕೆದೊಟ್ಟು ಶ್ರೀಧರ ಪೂಜಾರಿ, ಸುಶೀಲ ದಂಪತಿಗಳ ಪುತ್ರರಾಗಿರುವ ಇವರು ಬಹುಮುಖ ಪ್ರತಿಭೆಯಾಗಿದ್ದು ನಿರೂಪಣೆ, ಭಾಷಣ, ಬರವಣಿಗೆ, ನಟ, ನೃತ್ಯಪಟು, ಕುಣಿತ ಭಜನೆ, ತೀರ್ಪುಗಾರಿಕೆ ಕಾರ್ಯಕ್ರಮ ಸಂಯೋಜನೆ ಎಲ್ಲಾ ವಿಭಾಗದಲ್ಲಿ ಕೂಡ ಸೈ ಎನಿಸಿಕ್ಕೊಂಡಿದ್ದು ಹೀಗಾಗಲೆ ಜಿಲ್ಲೆಯಾದ್ಯಾಂತ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಹಲವಾರು ತರಬೇತಿ ನಡೆಸಿದ ಅನುಭವವನ್ನು ಪಡೆದಿದ್ದಾರೆ.

Leave a Comment

error: Content is protected !!