July 23, 2026
ಚಿತ್ರ ವರದಿ

ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸ್ ಆಚರಣೆ

ಬೆಳ್ತಂಗಡಿ: ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಅಂದು ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ 527 ಸೈನಿಕರು ಹಾಗೂ 1300 ಗಾಯಾಳುಗಳಾದ ಸೈನಿಕರಿಗೋಸ್ಕರ ವಿಶೇಷ ಪ್ರಾರ್ಥನೆ ನೆರವೇರಿತು. 25 ನೆಯ ವಿಜಯೋತ್ಸವದ ಸಂಭ್ರಮ ಸೂಚಕವಾಗಿ ಧಾರ್ಮಿಕ ಕೇಂದ್ರದಿಂದ ಭಾರತ ದೇಶದ ಸೈನಿಕ ಸೇವೆಯಿಂದ ನಿವೃತ್ತರಾದ ಥೋಮಸ್ ಪುತಿಯುಕುಲಂಗರ, ಮ್ಯಾಥ್ಯೂ ಉರಿಯಲ್ಪಡಿಕ್ಕಲ್ , ವಿನೋಯ್ ಚೆಮ್ಮಟ್ಟಕುಯಿ ಇವರುಗಳಿಗೆ ಗೌರವ ಸನ್ಮಾನವನ್ನು ನೀಡಲಾಯಿತು.
ಹಾಗೂ ಪ್ರಸ್ತುತ ಸೇವೆಯಲ್ಲಿ ನಿರತರಾಗಿರುವ ಥೋಮಸ್ ಪೀಡಿಗೆಯಿಲ್, ಜೋಮೊನ್ ಪುವತಿಂಗಲ್ ಇವರನ್ನು ಗೌರವಿಸುವ ಸಲುವಾಗಿ ಇವರ ತಂದೆಯವರಾದ ಫಿಲಿಪ್ ಪಿಡಿಗೇಲ್, ಬೇಬಿಚ್ಚನ್ ಪೂವತಿಂಗಲ್ ಇವರನ್ನು ಸನ್ಮಾನಿಸಲಾಯಿತು. ಧರ್ಮ ಕೇಂದ್ರದ ಧರ್ಮ ಗುರುಗಳಾದ ವಂದನೀಯ ಫಾದರ್ ಜೋಸೆಫ್ ವಾಳೂಕಾರನ್, ಧರ್ಮ ಕೇಂದ್ರದ ಟ್ರಸ್ಟಿಗಳಾದ ಜೋಳಿ ತಟ್ಟಾಂಪರಂಬಿಲ್, ಸೆಬಾಸ್ಟಿಯನ್ ವಳರ್ಕೊಟ್, ಜೋಸೆಫ್ ಪೀಡಿಗಯಿಲ್, ಸಂತೋಷ್ ಪೂವತಿಂಗಲ್ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಬ್ರದರ್ ಅರುಣ್ ಅಯ್ಯನಿಕಟ್ಟ್ ಅವರು, ಕಾರ್ಗಿಲ್ ಯುದ್ಧದ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ವಿನೋಯ್ ಚೆಮ್ಮಟ್ಟಕುಯಿ ಕಾರ್ಗಿಲ್ ಅನುಭವವನ್ನು ವಿವರಿಸಿದರು.
ಧರ್ಮ ಕೇಂದ್ರದ ನಾಲ್ಕು ತಲೆಮಾರುಗಳ ತಂದೆ ತಾಯಿಯವರಾಗಿರುವ ಗ್ರೇಟ್ ಗ್ರಾಂಡ್ ಪ್ಯಾರೆಂಟ್ಸ್ ವಲಿಯಪರಂಬಿಲ್ ಥೋಮಸ್ ತ್ರೇಸಿಯಮ್ಮ ಮತ್ತು ಚಮ್ಮಟ್ಟಕುಯಿ ವರ್ಗೀಸ್ ಕ್ಲಾರ ಅವರನ್ನು ಗ್ರಾಂಡ್ ಪ್ಯಾರೆಂಟ್ಸ್ ದಿನದಂದು ಹೋಗುಚ್ಚ ನೀಡಿ ಅಭಿನಂದಿಸಲಾಯಿತು.
ಸಂತ ಅಲ್ಫೋನ್ಸಾರವರ ಸ್ಮರಣೆಯ ಭಾಗವಾಗಿ ಅಲ್ಫೋನ್ಸಾ ಹೆಸರನ್ನು ಹೊಂದಿರುವ ನಾಮದಾರಿಗಳಿಗೆ ಧರ್ಮ ಕೇಂದ್ರದ ವತಿಯಿಂದ ಹೋಗುಚ್ಚ ನೀಡಿ ಶುಭಾಶಯಗಳನ್ನು ಕೋರಲಾಯಿತು.

Related posts

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ದಿ| ಶಿವಾನಂದ ಬಳ್ಳಾಲ್‌ಬಾಗ್ ರವರಿಗೆ ನುಡಿನಮನ

Suddi Udaya

ಕಿಲ್ಲೂರು ನಿವಾಸಿ ಗೀತಾ ಹೋಟೆಲ್ ಮಾಲಕ ಶಿವಾನಂದ ಪೂಜಾರಿ ನಿಧನ

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸಕ್ತ ವರ್ಷ ರೂ.5 ಕೋಟಿಗೂ ಅಧಿಕ ಮೊತ್ತದ ಉಚಿತ ಡಯಾಲಿಸಿಸ್ ಸೇವೆ, ಉಚಿತ ಜೌಷಧ ಹಾಗೂ ಚಿಕಿತ್ಸೆ: ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್

Suddi Udaya

ಬುದ್ಧಿಮಾಂದ್ಯ ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಬೆಳ್ತಂಗಡಿ ಕಸಾಪ ಸಹಯೋಗದೊಂದಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರ ಚಿಂತನಾ ಬರಹಗಳ ಸಂಕಲನ ‘ಮೌಲ್ಯಗಳ ಹುಡುಕಾಟದಲ್ಲಿ’ ಪುಸ್ತಕ ಬಿಡುಗಡೆ’ ಕಾರ್ಯಕ್ರಮ

Suddi Udaya
error: Content is protected !!