September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು, ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

ಬಳಂಜ: ಬಳಂಜ ಗ್ರಾಮದ ಕಜೆಕೋಡಿ ದರ್ಖಾಸು ನಿವಾಸಿ ರಾಜೇಶ್ ಆಚಾರಿರವರ ಮನೆಯು ಭಾರಿ ಮಳೆಗೆ ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ಸಮಾಜ ಸೇವಕರಾದ ಸತೀಶ್ ದೇವಾಡಿಗರ ನೇತೃತ್ವದಲ್ಲಿ ಯುವ ನಾಯಕರುಗಳಾದ ಪುರಂದರ ಪೂಜಾರಿ ಪೇರಾಜೆ, ಅಶ್ವಿನ್ ಕುಮಾರ್ ಬೊಂಟ್ರೋಟ್ಟು, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಿನೇಶ್ ಪಿ.ಕೆ, ದೇವಿ ಪ್ರಸಾದ್ ಶೆಟ್ಟಿ,ದೇಜಪ್ಪ ಪೂಜಾರಿ,ರಮನಾಥ್ ಶೆಟ್ಟಿ, ಸಮಾಜಸೇವಕರಾದ ಸದಾನಂದ ಪೂಜಾರಿ ಬೊಂಟ್ರೋಟ್ಟು, ಪಂಚಾಯತ್ ಸದಸ್ಯರಾದ ರವೀಂದ್ರ. ಬಿ.ಅಮೀನ್ , ಪ್ರಶಾಂತ್ ಶೆಟ್ರು ಕಜೆಕೋಡಿ,ಪುರುಷೋತ್ತಮ ಅಚಾರಿ ಅಟ್ಲಾಜೆ,ಪ್ರವೀಣ್ ಪೂಜಾರಿ ಮುಡಯಿಬೆಟ್ಟು, ಸದಾನಂದ ತೋಟದಪಲ್ಕೇ, ಅನ್ವಿತ್ ಕುಮಾರ್ ಮುಡಯಿಬೆಟ್ಟು, ರೂಪಾ ಮುಡಯಿಬೆಟ್ಟು,ತುಳಸಿ ಅಟ್ಲಾಜೆ, ಪ್ರೇಮಾ ಅಶೋಕ್ ಮುಡಾಯಿಬೆಟ್ಟು ಇವರೆಲ್ಲರ ಸಹಕಾರದಿಂದ ಮನೆಯ ಮಾಡಿಗೆ ಟಾರ್ಪಲ್ ಹಾಕಿ ಮಳೆಯ ನೀರು ಸೊರದಂತೆ ತಕ್ಕ ಮಟ್ಟಿನ ವ್ಯವಸ್ಥೆ ಮಾಡಲಾಗಿದೆ.

ಬಾವಿಯಿಂದ ನೀರು ತೆಗೆಯಲು ವ್ಯವಸ್ಥೆ ಕೂಡ ಇರಲಿಲ್ಲ ಅದಕ್ಕೆ ಬೇಕಾಗುವ ಮರದ ದಿಂಬುನ ವ್ಯವಸ್ಥೆ ಕೂಡ ಮಾಡಲಾಯಿತು. ಮಾನವೀಯ ನೆಲೆಯಲ್ಲಿ ಸಹಕಾರ ಕೊಟ್ಟ ಎಲ್ಲ ಹಿರಿಯರಿಗೆ,ಸಹೋದರ ಸಹೋದರಿಯರಿಗೆ ರಾಜೇಶ್ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ

Suddi Udaya

ಯಕ್ಷಭಾರತಿಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ”

Suddi Udaya

ಬುರುಡೆ ಷಡ್ಯಂತ್ರ ಪ್ರಕರಣ: ಇಬ್ಬರ ಮೊಬೈಲ್ ಬಿಡುಗಡೆ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Suddi Udaya

ಬಳಂಜ ಸ.ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಹೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ಯ ದಿನಾಚರಣೆ: ನಿವೃತ್ತ ಅಡುಗೆ ಸಿಬ್ಬಂದಿ ಸರೋಜಾ ನಾಯ್ಕರಿಗೆ ಸನ್ಮಾನ ಧನ ಸಹಾಯ ಹಸ್ತಾಂತರ

Suddi Udaya

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya
error: Content is protected !!