July 26, 2026
ಸಮಸ್ಯೆ

ಗುರುವಾಯನ ಕೆರೆ ಮಳೆಯ ಆರ್ಭಟ ಚರಂಡಿ ಮುಚ್ಚಿದ ಪರಿಣಾಮ ರಸ್ತೆಯಲ್ಲಿ ಹರಿದ ನೀರು ವಾಹನ ಸವಾರರ ಪರದಾಟ

ಗುರುವಾಯನಕೆರೆ: ಮಳೆರಾಯನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಗುರುವಾಯನಕೆರೆಯ ಮಳೆಯ ನೀರು ರಸ್ತೆಯಲ್ಲಿ ಹರಿದು ಬಂಟರ ಭವನ‌ದ ಹತ್ತಿರ ನೀರು ನಿಂತು ನದಿಯಂತಾಗಿದೆ. ಜೈನ್ ಪೇಟೆಯ ಕೆಲವು ಮನೆಗಳು ಜಲಾವೃತಗೊಂಡಿದೆ ಹಾಗೂ ಮಸೀದಿ ಬಳಿ ಕುಸಿತವಾದ ಘಟನೆ ಸಂಭವಿಸಿದೆ.

ಇಂದು ಸಂಜೆ ಸುರಿದ ಭಾರಿ ಮಳೆಗೆ ಗುರುವಾಯನಕೆರೆ ಪೇಟೆಯ ಎಲ್ಲಾ ನೀರು ಬಂಟರ ಭವನದ ಹತ್ತಿರ ರಸ್ತೆಯಲ್ಲಿ ಶೇಖರಣೆಯಾಗಿ ನದಿಯಂತಾಗಿದೆ. ಪರಿಣಾಮ‌ ವಾಹನ ಸವಾರರು ಹೋಗಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತ್ತ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಕಷ್ಟದಿಂದ ಸಾಗುತ್ತಿದ್ದಾರೆ.

Related posts

ಮಂಗಗಳ ಹಾವಳಿಯಿಂದ ತತ್ತರಿಸಿದ ನಿಡ್ಲೆ ಗ್ರಾಮಸ್ಥರು: ನಿಡ್ಲೆ ಜನಸ್ಪಂದನ ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

Suddi Udaya

ಆರಂಬೋಡಿ: ಹನ್ನೆರಡುಕವಲು ರಸ್ತೆ ಅವ್ಯವಸ್ಥೆ, ದುರಸ್ಥಿಗೆ ಗ್ರಾಮಸ್ಥರ ಆಗ್ರಹ, ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಕಡಿರುದ್ಯಾವರ: ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

Suddi Udaya

ಕರಾಯ ವಿದ್ಯುತ್ ಫೀಡರುಗಳಲ್ಲಿ ನಾಳೆ (ಆ.8) ವಿದ್ಯುತ್ ನಿಲುಗಡೆ

Suddi Udaya

ಗುಡ್ಡೆ ಜರಿದು ಶೌಚಾಲಯ ಹಾಗೂ ಮನೆಯ ಮೇಲೆ ಬಿದ್ದು ಸಂಪೂರ್ಣಹಾನಿ

Suddi Udaya

ಕರಾಯ: ಗುಡ್ಡ ಕುಸಿದು ಬಿದ್ದು, ತೋಟಗಳಿಗೆ ಹಾನಿ

Suddi Udaya
error: Content is protected !!