ಗುರುವಾಯನ ಕೆರೆ ಮಳೆಯ ಆರ್ಭಟ ಚರಂಡಿ ಮುಚ್ಚಿದ ಪರಿಣಾಮ ರಸ್ತೆಯಲ್ಲಿ ಹರಿದ ನೀರು ವಾಹನ ಸವಾರರ ಪರದಾಟ

Suddi Udaya

ಗುರುವಾಯನಕೆರೆ: ಮಳೆರಾಯನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಮೋರಿ ಸಂಪೂರ್ಣ ಮುಚ್ಚಿದ ಪರಿಣಾಮ ಗುರುವಾಯನಕೆರೆಯ ಮಳೆಯ ನೀರು ರಸ್ತೆಯಲ್ಲಿ ಹರಿದು ಬಂಟರ ಭವನ‌ದ ಹತ್ತಿರ ನೀರು ನಿಂತು ನದಿಯಂತಾಗಿದೆ. ಜೈನ್ ಪೇಟೆಯ ಕೆಲವು ಮನೆಗಳು ಜಲಾವೃತಗೊಂಡಿದೆ ಹಾಗೂ ಮಸೀದಿ ಬಳಿ ಕುಸಿತವಾದ ಘಟನೆ ಸಂಭವಿಸಿದೆ.

ಇಂದು ಸಂಜೆ ಸುರಿದ ಭಾರಿ ಮಳೆಗೆ ಗುರುವಾಯನಕೆರೆ ಪೇಟೆಯ ಎಲ್ಲಾ ನೀರು ಬಂಟರ ಭವನದ ಹತ್ತಿರ ರಸ್ತೆಯಲ್ಲಿ ಶೇಖರಣೆಯಾಗಿ ನದಿಯಂತಾಗಿದೆ. ಪರಿಣಾಮ‌ ವಾಹನ ಸವಾರರು ಹೋಗಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅತ್ತ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಕಷ್ಟದಿಂದ ಸಾಗುತ್ತಿದ್ದಾರೆ.

Leave a Comment

error: Content is protected !!