September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ ಕರ್ಮಂದೊಟ್ಟು ಪರಿಸರದಲ್ಲಿ ಧರೆ ಕುಸಿತ: ಅಪಾಯದಲ್ಲಿ ಕೆಲವು ಮನೆಗಳು, ಬಳಂಜ ಗ್ರಾ.ಪಂ. ನಲ್ಲಿ ತಾತ್ಕಾಲಿಕ ವ್ಯವಸ್ಥೆ, 4 ಕುಟುಂಬಗಳು, 16 ಜನ ಸ್ಥಳಾಂತರ

ಬಳಂಜ: ಕಳೆದ ಕೆಲ ಸಮಯದಿಂದ ಧಾರಕಾರವಾಗಿ ಮಳೆ ಸುರಿಯುತ್ತಿದ್ದು ಕರ್ಮಂದೊಟ್ಟು ಪರಿಸರದಲ್ಲಿ ಧರೆ ಜರಿದು ಪ್ರವಾಹ ಎದುರಾಗಿದ್ದು ಸಂತ್ರಸ್ಥ ಗ್ರಾಮಸ್ಥರಿಗೆ ಬಳಂಜ ಗ್ರಾಮ ಪಂಚಾಯತ್ ನಲ್ಲಿ ತಾತ್ಕಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಬಳಂಜ ಗ್ರಾಮದ ಕರ್ಮಂದೊಟ್ಟು ಪರಿಸರದ ಉಸ್ಮಾನ್, ಚಂದ್ರಹಾಸ, ಆನಂದ ಆಚಾರ್ಯ, ತಾಹಿರಾ ಮನೆಗಳು ಅಪಾಯದ ಪರಿಸ್ಥಿತಿಯಲ್ಲಿದ್ದು ಈ ಕುಟುಂಬವನ್ನು ಬಳಂಜ ಗ್ರಾಮ ಪಂಚಾಯತ್ ನ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ಕು ಕುಟುಂಬದಲ್ಲಿ 16 ಸದಸ್ಯರಿದ್ದು ಅದರಲ್ಲಿ 5 ಸಣ್ಣ ಮಕ್ಕಳಿದ್ದಾರೆ.

ಈ ಪರಿಸರಕ್ಕೆ ಬಳಂಜ ಗ್ರಾ.ಪಂ. ಅಧ್ಯಕ್ಷೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸದಸ್ಯರು , ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಬೈಂದೂರು ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವೃತಾಚರಣೆ: ಉ.ಕ. ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಭೇಟಿ

Suddi Udaya

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Suddi Udaya

ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಮಹಾಸಭೆ ಹಾಗೂ ಒಕ್ಕೂಟ ಬಲವರ್ಧನೆ ತರಬೇತಿ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವ

Suddi Udaya

ಬಳಂಜ: ಕರಿಯ ಪೂಜಾರಿ ಕೊಂಗುಳ ಅನಾರೋಗ್ಯದಿಂದ ನಿಧನ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಒತ್ತಡ ನಿರ್ವಹಣೆ” ಕಾರ್ಯಾಗಾರ

Suddi Udaya
error: Content is protected !!