ಭೀಕರ ಮಳೆಗೆ ರೆಖ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತ: ಗರ್ಭಗುಡಿ , ಸುತ್ತು ಪೌಳಿಗೆ ಹಾನಿ

Suddi Udaya

ರೆಖ್ಯ : ಭಾರೀ ಮಳೆಯಿಂದಾಗಿ ಪ್ರಕೃತಿ ವಿಕೋಪಗಳು ನಡೆಯುತ್ತಲ್ಲೇ ಇದ್ದು ರೆಖ್ಯ ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಜರಿದು ದೇವಸ್ಥಾನ ಗರ್ಭಗುಡಿ ಹಾಗೂ ಸುತ್ತು ಪೌಳಿಗೆ ಹಾನಿಯಾದ ಘಟನೆ ಜು.31ರಂದು ರಾತ್ರಿ ನಡೆದಿದೆ.

3 ವರ್ಷದ ಹಿಂದೆ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿತು. ಗುಡ್ಡ ಜರಿದ ಪರಿಣಾಮ ಗುಡ್ಡದಲ್ಲಿದ್ದ ರಬ್ಬರು ಮರಗಳು ಮಣ್ಣಿನೊಂದಿಗೆ ಬಂದು ದೇವಸ್ಥಾನದ ಹತ್ತಿರ ಬಂದು ಬಿದ್ದಿದ್ದೆ ಹಾಗೂ ತಡೆಗೋಡೆಗೂ ಹಾನಿಯುಂಟಾಗಿದೆ.

ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅರಸಿನಮಕ್ಕಿ ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನ್ ಕೆ., ರವರು ತಹಶೀಲ್ದಾರ್ ಗೆ ಮಾಹಿತಿ ನೀಡಿದ್ದಾರೆ.

Leave a Comment

error: Content is protected !!