ನಿಡ್ಲೆ : ಕೊಡಂಗೆಯಲ್ಲಿ ಗುಡ್ಡ ಕುಸಿತ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ತುರ್ತು ಕಾರ್ಯಾಚರಣೆ

Suddi Udaya

ಕೊಕ್ಕಡ ವಲಯ ಬರೆಂಗಾಯ ಕಾರ್ಯಕ್ಷೇತ್ರದ ನಿಡ್ಲೆ ಗ್ರಾಮದ ಕೊಡಂಗೆ ಎಂಬಲ್ಲಿ ಗುಡ್ಡ ಕುಸಿದು ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಯಲ್ಲಿ ಓಡಾಡಲು ತುಂಬಾ ಕಷ್ಟಕರವಾಗಿದ್ದು ನಿಡ್ಲೆ, ಕಳೆಂಜ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಘಟಕ ಪ್ರತಿನಿಧಿ ಗಿರೀಶ್ ಇವರ ಮಾಹಿತಿಯ ಮೇರೆಗೆ ಈ ತುರ್ತು ಕಾರ್ಯಾಚರಣೆಯನ್ನು ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ದಾಮೋದರ, ಮೆಸ್ಕಾಂ ಇಲಾಖೆಯ ಉಮೇಶ್, ನಿಡ್ಲೆ ಗ್ರಾಮ ಪಂಚಾಯತ್ ಶ್ರೀನಿವಾಸ, ಶೌರ್ಯ ಸ್ವಯಂ ಸೇವಕರಾದ ಗಿರೀಶ್, ಸುಂದರ ಎಮ್.ಕೆ, ಜಯಂತ, ಸದಾನಂದ, ಪುರುಷೋತಮ, ಜನಾರ್ಧನ, ಉಮೇಶ್, ಆನಂದ, ವಿನಯಚಂದ್ರ, ಸೇವಾಪ್ರತಿನಿಧಿ ಆಶಾಲತ ಹಾಗೂ ಸ್ಥಳೀಯರು ಈ ತುರ್ತು ಕಾರ್ಯಾಚರಣೆಗೆ ಪಾಲ್ಗೊಂಡಿದ್ದರು.

Leave a Comment

error: Content is protected !!