23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಾಡುಹಗಲೇ ಚರ್ಚ್ ರೋಡ್ ಬಳಿ ನಿಲ್ಲಿಸಿದ್ದ ಬೈಕ್ ನಾಪತ್ತೆ

ಬೆಳ್ತಂಗಡಿ : ರಿಪೇರಿಗಾಗಿ ತಂದು ನಿಲ್ಲಿಸಿ ಬೈಕ್ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಇಂದು ಸಂಜೆ ನಡೆದಿದೆ‌.

ಮುಂಡೂರು ಗ್ರಾಮದ ಪರಂಬುಡೆ ನಿವಾಸಿ ಕೆ.ಜಗನ್ನಾಥ್ ಅಚಾರ್ಯ ಎಂಬವರಿಗೆ ಸೇರಿದ KA-21-E-7225 ನಂಬರಿನ ಸ್ಲೇಂಡರ್ ಬೈಕ್ ಹಲವು ಸಮಯಗಳಿಂದ ಉಪಯೋಗಿಸದೆ ಮನೆಯಲ್ಲಿ ನಿಲ್ಲಿಸಿದ್ದಲ್ಲಿಯೇ ಇತ್ತು. ಬೈಕ್ ಉಪಯೋಗಿಸದೆ ಇತ್ತಿಚೆಗೆ ಸರಿಯಾಗಿ ಚಲಾಯಿಸಲು ಅಗುತ್ತಿರಲ್ಲಿಲ್ಲ‌. ಬೈಕ್ ಸಂಪೂರ್ಣ ರಿಪೇರಿ ಮಾಡಲು ತಮ್ಮ ರಮೇಶ್ ಅಚಾರ್ಯನಿಗೆ ತಿಳಿಸಿದಂತೆ ಡಿ.26 ರಂದು ಬೆಳಗ್ಗೆ ಮನೆಯಿಂದ ತಂದು ಚರ್ಚ್ ರೋಡ್ ಬಳಿ ಪಾರ್ಕ್ ಮಾಡಿ ರಮೇಶ್ ಅಚಾರ್ಯ ಚಿನ್ನದ ಕೆಲಸಕ್ಕಾಗಿ ಪುತ್ತೂರಿಗೆ ಹೋಗಿ ಸಂಜೆ ಬಂದು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.

ಈ ಬಗ್ಗೆ ರಮೇಶ್ ಅಚಾರ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

Related posts

ನೀತಿ ಸಂಹಿತೆ ಜಾರಿ: ಬೆಳ್ತಂಗಡಿ ಶ್ರಮಿಕ ಶಾಸಕರ ಕಚೇರಿಯ ಕಾರ್ಯಚರಣೆ ಸ್ಥಗಿತ

Suddi Udaya

ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಗಣೇಶೋತ್ಸವಕ್ಕೆ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬ್ಯಾನರ್

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ವಿದ್ಯಾಸಿರಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಮಹೇಶ್‌ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Suddi Udaya

ಬಳಂಜ: ಸುವರ್ಣ ನಿಲಯದ ವೆಂಕಮ್ಮ ನಿಧನ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ

Suddi Udaya
error: Content is protected !!