22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ಮುಂದುವರಿದ ಭಾರಿ ಮಳೆ,ಅಟ್ಲಾಜೆ-ಬದಿನಡೆ,ಪೊಯ್ಯೆಗುಡ್ಡೆ ಮಣ್ಣಿನ ರಸ್ತೆ ಕೆಸರುಮಯ: ಸಾರ್ವಜನಿಕರು ನಡೆಯಲಾಗದ ಪರಿಸ್ಥಿತಿ ನಿರ್ಮಾಣ,ಶೀಘ್ರ ದುರಸ್ಥಿಗೆ ಒತ್ತಾಯ

ಬಳಂಜ: ಅಟ್ಲಾಜೆ – ಬದಿನಡೆ (ಕೊಂಗುಲ)- ಪೊಯ್ಯಗುಡ್ಡೆ ರಸ್ತೆಯು ಮಣ್ಣಿನಿಂದ ಸಂಪೂರ್ಣ ಹದಗೆಟ್ಟು ಯಾವುದೇ ವಾಹನಗಳು ಹೋಗದ ರೀತಿಯಲ್ಲಿ ಹಾಗೂ ಸಾರ್ವಜನಿಕರು ನಡೆದಾಡಲು ಆಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬದಿನಡೆ – ಪೊಯ್ಯಗುಡ್ಡೆ ಸಂಪರ್ಕ ರಸ್ತೆಯ ಸೇತುವೆ ಬಳಿ ರಸ್ತೆಯ ಮಣ್ಣು ಕುಸಿದಿದ್ದು ಸಂಪರ್ಕ ವ್ಯವಸ್ಥೆಯು ಕುಡಿದು ಹೋಗಿರುವುದರಿಂದ ಸಾರ್ವಜನಿಕರು ಯಾವುದೇ ಕಡೆಯಿಂದಲೂ ತಮ್ಮ ತಮ್ಮ ಕೆಲಸಗಳಿಗೆ ಹಾಗೂ ಹಲವಾರು ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಭಂಧ ಪಟ್ಟ ಇಲಾಖೆಯವರು ಪಂಚಾಯತ್ ನವರು ಶೀಘ್ರವಾಗಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕಾಗಿ ಕೊಂಗುಳ ಬದಿನಡೆ ಕ್ಷೇತ್ರದ ಧರ್ಮದರ್ಶಿ ಜಯ ಸಾಲಿಯಾನ್ ಒತ್ತಾಯಿಸಿದ್ದಾರೆ.

Related posts

ಧರ್ಮಸ್ಥಳ ಗ್ರಾ.ಪಂ. ವತಿಯಿಂದ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಸನ್ಮಾನ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya

ಮಧ್ಯಾಂತರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ‘ಎಕ್ಸೆಲೆನ್ಸ್ ಅವಾರ್ಡ್’ ಹಾಗೂ ‘ಗೋಲ್ಡನ್ ಸ್ಟಾರ್ ಪ್ರೆಸಿಡೆಂಟ್’ ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ 79 ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya

ಉಜಿರೆ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ

Suddi Udaya
error: Content is protected !!