ಬಟ್ಲಡ್ಕ ಜುಮಾ ಮಸೀದಿಯಲ್ಲಿ ದಿ| ಶೈಖುನಾ ಮರ್ಹೂಮ್ ಕೂರಾ ತಂಙಲ್ ಅವರ ಹೆಸರಿನಲ್ಲಿ ಅನುಸ್ಮರಣೆ ಕಾರ್ಯಕ್ರಮ

Suddi Udaya

ಬಂದಾರು : ಇಲ್ಲಿನ ಬಟ್ಲಡ್ಕ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ಅಗಲಿದ ಶೈಖುನಾ ಮರ್ಹೂಮ್ ಕೂರಾ ತಂಙಲ್ ಅವರ ಹೆಸರಿನಲ್ಲಿ ಅನುಸ್ಮರಣೆ ಕಾರ್ಯಕ್ರಮ ಬಹು ಶೈಖುನಾ ಸಾದಾತ್ ತಂಙಲ್ ರವರ ನೇತೃತ್ವದಲ್ಲಿ ಆ.2 ರಂದು ಮಗ್ರಿಬ್ ನಮಾಝ್ ಬಳಿಕ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಬಂದಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ವಾಗತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ನೆರವೇರಿಸಿದರು. ಉದ್ಘಾಟನೆ ಸ್ಥಳೀಯ ಖತೀಬ್ ಬಹು ಮುಹಮ್ಮದ್ ಆಸಿಫ್ ಸಖಾಫಿ ನಡೆಸಿದರು. ಪದ್ಮುಂಜ ಖತೀಬ್ ಮುಹಮ್ಮದ್ ನಿಜಾಮುದ್ದೀನ್ ಸಖಾಫಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಬಹು! ಮನ್ಸೂರ್ ಮುಈನಿ ಅದನಿ, ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ ಅದಂ ಅಲ್ ಮದೀನಾ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ಕ್ರಮಕ್ಕೆ ಭಾಗವಹಿಸಿದ್ದರು.
ವರದಿ: ಮುಹಮ್ಮದ್ ಬಂದಾರು

Leave a Comment

error: Content is protected !!