ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಭಂಡಾರಿಗೋಳಿ ವತಿಯಿಂದ ಆರ್ಥಿಕ ಧನ ಸಹಾಯ ಹಾಗೂ ಅಕ್ಕಿ ವಿತರಣೆ

Suddi Udaya

ಸುಲ್ಕೇರಿ : ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ (ರಿ )ಭಂಡಾರಿಗೋಳಿ ಇದರ ವತಿಯಿಂದ ಆರ್ಥಿಕ ಸಹಾಯಧನ ಹಾಗೂ ಅಸಕ್ತರಿಗೆ ಅಕ್ಕಿಯನ್ನು ಆ.5ರಂದು ನೀಡಲಾಯಿತು.

ಅನಾರೋಗ್ಯದ ನಿಮಿತ್ತ ಸೀತಮ್ಮ ಶೆಟ್ಟಿ ಮುಡಿಪಿರೆ , ರಾಕೇಶ್ ಕುಲಾಲ್ ಮುಡಿಪಿರೆ, ನಾರಾಯಣ ಗೌಡ ಮಜೋಡಿ ಇವರಿಗೆ ಸಹಾಯಧನ ನೀಡಲಾಯಿತು.

ಶಂಬು ಮುಡಿಪಿರೆ , ಶೇಖರ ಪೂಜಾರಿ ಮಂಜಲೊಟ್ಟು, ಶೇಖರ ಪೂಜಾರಿ ಮುಡಿಪಿರೆ, ಬಾಗಿ ಸುಲ್ಕೇರಿ, ನವೀನ ಪೂಜಾರಿ ಮುಡಿಪಿರೆ ಇವರಿಗೆ 50 ಕೆ.ಜಿ ಅಕ್ಕಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!