ಆ.18 : ಉಜಿರೆ ವರ್ತಕರ ಕುಟುಂಬ ಮಿಲನ; ಆಮಂತ್ರಣ ಪತ್ರ ಬಿಡುಗಡೆ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ 2024ಎಂಬ ಕಾರ್ಯಕ್ರಮ ಆ .18 ರಂದು ನಡೆಯಲಿದೆ.

ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವನ್ನು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರವರು ಉದ್ಘಾಟಿಸಿದರು.

ಈ ಸಂದರ್ಭ ಉಜಿರೆ ವರ್ತಕ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತರು, ಕಾರ್ಯದರ್ಶಿ ಲಕ್ಷ್ಮಣ್, ಜೊತೆಕಾರ್ಯದರ್ಶಿ ಪ್ರಸಾದ್ ರಮ್ಯ, ಕೋಶಾಧಿಕಾರಿ ಅಬುಬಕ್ಕರ್, ವಿಶ್ವನಾಥ ಭಂಡಾರಿ, ಅರುಣ್ ಕುಮಾರ್, ಪ್ರಬಾಕರ್, ಭರತ್ ಕುಮಾರ್, ಹುಕುಂರಾಮ್ ಪಟೇಲ್, ಗಣೇಶ್, ಜಯಂತ್, ವಿಜಯ್ ಕುಮಾರ್, ಮೋಹನ್ ಚೌದರಿ, ಮಂಜುನಾಥ ಬಾಳಿಗ, ರಮಾನಂದ, ಯೋಗೀಶ, ಲಕ್ಷ್ಮಣ ,ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!