ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಕೊಕ್ಕಡ : ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಜುಲೈ 9 ರಂದು ಭಾರತೀಯ ಮಜ್ದೂರ್ ಸಂಘದ, ಅಖಿಲ ಭಾರತೀಯ ಸಂಘಟನ ಕಾರ್ಯದರ್ಶಿ ಶ್ರೀ. ಬಿ ಸುರೇಂದ್ರನ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ. ಎಚ್ ಎಲ್ ವಿಶ್ವನಾಥ್ ಮತ್ತು ರಾಜ್ಯ ಕಾರ್ಯದರ್ಶಿ ಶ್ರೀ ಜಯರಾಜ್ ಸಾಲ್ಯಾನ್ ಇವರು ಭೇಟಿ ನೀಡಿ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಶುಭಹಾರೈಸಿದರು.

ಈ ಸಂದರ್ಭ ಕ್ಷೇತ್ರದ ವತಿಯಿಂದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.
ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಪುರಂದರ ಕಡಿರ, ಬಾಲಕೃಷ್ಣ ನೈಮಿಷ, ಚಂದ್ರಶೇಖರ ಗಾಣಗಿರಿ, ಶ್ರೀಧರ ಬಳಕ, ವಿನಾಯಕ್ ರಾವ್ ಕನ್ಯಾಡಿ ಹಾಗೂ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a Comment

error: Content is protected !!