ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಉರುವಾಲು ಸೇವಾ ಸಮಿತಿ ವತಿಯಿಂದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

Suddi Udaya

ಉರುವಾಲು: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಉರುವಾಲು ಇಲ್ಲಿ ಆಗಸ್ಟ್ 12ರಂದು ಶಾಲಾ ಸೇವಾ ಸಮಿತಿ ವತಿಯಿಂದ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಭಟ್ ವಹಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರತಿನಿಧಿಯಾಗಿ ಹಾರಕೆರೆ ಶ್ರೀ ನಾರಾಯಣ ಭಟ್, ದಿಗ್ದರ್ಶಕರಾದ ಶ್ರೀ ಈಶ್ವರ್ ಭಟ್ ಮಾಯಿಲ್ತೋಡಿ , ಕಾರ್ಯದರ್ಶಿಗಳಾದ ಶ್ರೀ ಶ್ಯಾಮ್ ಪ್ರಸಾದ್ ,ಕೋಶಾಧಿಕಾರಿಗಳಾದ ಶ್ರೀ ಶಿವಪ್ರಸಾದ್,ಸಲಹೆಗಾರರಾದ ಶ್ರೀ ಸತೀಶ್ ಬನಾರಿ,ಶಾಲಾ SDMC ಅಧ್ಯಕ್ಷರುಗಳಾದ ಶ್ರೀ ಮಹಮ್ಮದ್ ಪೀರ್ಯ, ಉರುವಾಲು ಮಸೀದಿ ಅಧ್ಯಕ್ಷರುಗಳಾದ ಶ್ರೀ ಹಮೀದ್ , ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಶೋಭಿತ ಕೆ ಆರ್, ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಸಣ್ಣಪ್ಪ H. ಹಾಗೂ ಪೋಷಕರ ಸಮ್ಮುಖದಲ್ಲಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.


ಈ ಕಾರ್ಯಕ್ರಮವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಶಾಹಿದ ಬಾನು ನಿರೂಪಿಸಿದರು ,ಮುಖ್ಯಶಿಕ್ಷಕರಾದ ಶ್ರೀ ಸಣ್ಣಪ H. ಸ್ವಾಗತಿಸಿದರು, ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ಸುಮಯ್ಯ ಧನ್ಯವಾದ ಸಮರ್ಪಿಸಿದರು.

Leave a Comment

error: Content is protected !!