ನಿಡ್ಲೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

Updated on:

ನಿಡ್ಲೆ :ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿ ನಿಡ್ಲೆ ಇದರ ಸಭೆಯು ನಿಡ್ಲೆ ಕೆಬಿಜಿ ಕಾಂಪ್ಲೆಕ್ಸ್ ನಲ್ಲಿ ಆ. 10ರಂದು ಜರುಗಿತು.


ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾನೂನು ಸಲಹೆಗಾರ ನವೀನ್ ಬಿ.ಕೆ, ಕೃಷ್ಣಪ್ಪ ಗೌಡ ಸವಣಾಲು ಆಗಮಿಸಿದ್ದರು.

ವೇದಿಕೆಯಲ್ಲಿ ನಾಗೇಶ್ ಗೌಡ ಶೇಡಿ ಹಾಗೂ ಪ್ರಕಾಶ್ ಟೈಲರ್ ನಿಡ್ಲೆ, ಗೌಡರ ಯುವ ವೇದಿಕೆ ಅಧ್ಯಕ್ಷ ರಾಜೇಂದ್ರ ಗೌಡ ಗಾಣಂತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಜರಗಿತು.

ಗೌರವಾಧ್ಯಕ್ಷರಾಗಿ ಭದ್ರಯ ಗೌಡ ಸಣಿಲ, ಅಧ್ಯಕ್ಷರಾಗಿ ನಾಗೇಶ್ ಗೌಡ ಶೇಡಿ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಪಿಲಿಕಜೆ, ಖಜಾಂಜಿಯಾಗಿ ಗೋಪಾಲಕೃಷ್ಣ ಐತ್ತೂರು ಆಯ್ಕೆಯಾದರು.

ಗಿರೀಶ್ ಗೌಡ ಬಾರಗುಡ್ಡೆ ಸ್ವಾಗತಿಸಿ, ಶ್ರೀಮತಿ ಪೂರ್ಣಿಮ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿ, ವಸಂತ ಗೌಡ ನಿಡ್ಲೆ ವಂದಿಸಿದರು.

Leave a Comment

error: Content is protected !!