ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರ ದಲ್ಲಿ 78ನೇ ಸ್ವಾತಂತ್ರೋತ್ಸವ ವನ್ನು ಆಚರಿಸಲಾಯಿತು.

ಪಂಚಾಯತ್ ಸದಸ್ಯರಾದ ಶ್ರೀಮತಿ ಪದ್ಮಾವತಿಯವರು ಧ್ವಜಾರೋಹಣ ನೆರವೇರಿಸಿದರು. ಅಂಗನವಾಡಿ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಸಭಾಧ್ಯಕ್ಷರಾದ ಚಂದ್ರಪೂಜಾರಿಯವರು ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ವೇದಾವತಿ, ಸಲಹಾ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್,ಉಪಾಧ್ಯಕ್ಷರುಗಳಾದ ಎಮ್.ಸಿ ನಾರಾಯಣ ಗೌಡ, ರಘುನಾಥ, ಮಕ್ಕಳ ಪೋಷಕರು, ಊರವರು, ಸಲಹಾ ಸಮಿತಿ ಸದಸ್ಯರು, ಕಾವೇರಿ ಹಾಗು ಸ್ನೇಹ ಸ್ತ್ರೀ ಶಕ್ತಿ ತಂಡದ ಸದಸ್ಯರು, ಧರ್ಮಶ್ರೀ ಸಂಜೀವಿನಿ ತಂಡದ ಸದಸ್ಯರು, ಪಶು ಸಖಿ ಪೂರ್ಣಿಮಾ, ಹಳೆವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮನಿತಾ ಸಿ ಶೆಟ್ಟಿ ನಿರೂಪಿಸಿ ವಂದಿಸಿದರು.

ಸಹಾಯಕಿ ಸುನಂದ, ಭಾರತಿ, ಜಯಶ್ರೀ, ಅರುಣ ಎ ಮೆಹಂದಳೆ,ಚೆನ್ನಪ್ಪ ಶೆಟ್ಟಿ ಸಹಕರಿಸಿದರು.

Leave a Comment

error: Content is protected !!