ಉಜಿರೆ ಖಲೀಫಾ ಜುಮಾ ಮಸೀದಿ ಹಾಗೂ ಅಲ್ ಬದ್ರಿಯಾ ಅರೇಬಿಕ್ ಮದರಸ ಕಮಿಟಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಖಲೀಫಾ ಜುಮಾ ಮಸೀದಿ ಹಾಗೂ ಅಲ್ ಬದ್ರಿಯಾ ಅರೇಬಿಕ್ ಮದರಸ ಕಮಿಟಿ ಗಾಂಧಿನಗರ ಇದರ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಅಲ್ ಬದ್ರಿಯಾ ಅರೇಬಿಕ್ ಮದರಸ ಮುಂಭಾಗದಲ್ಲಿ ನಡೆಯಿತು.

ಧ್ವಜಾರೋಹಣ ನೇತೃತ್ವವನ್ನು ಜಮಾತಿನ ಅಧ್ಯಕ್ಷರು ಅಬ್ದುಲ್ ಲತೀಫ್ ಜೆ .ಸಿ.ಬಿ ನೆರವೇರಿಸಿದರು. ಉಸ್ತಾದ್ ಹನೀಫ್ ಸಅದಿ ದುವಾಗೆ ನೇತೃತ್ವ ನೀಡಿದರು.
ಎಸ್ ಬಿ ಎಸ್. ಮಕ್ಕಳು ರಾಷ್ಟ್ರಗೀತೆ ಹಾಡನ್ನು ಹಾಡಿದರು ಸಂದೇಶ ಭಾಷಣವನ್ನು ಸದರ್ ಉಸ್ತಾದ್ ಹಾಫಿಲ್ ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ ಶಾಂತಿ ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದು ನುಡಿದರು. ಅಶ್ರಫ್ ಸಖಾಫಿ ಉಸ್ತಾದ್ ಪ್ರತಿಜ್ಞಾ ವಚನ ಬೋಧಿಸಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸ್ಮಾರ್ಟ್ ಕೋಶಾಧಿಕಾರಿ ಮುಹಮ್ಮದ್ ಕರಾಯ ಹಾಗೂ ಕಮಿಟಿಯ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮದರಸ ಮಕ್ಕಳು ಪೋಷಕರು ಜಮಾತಿನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ ಎಸ್.ಬಿ,ಎಸ್ ವತಿಯಿಂದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


ಮದರಸ ಅಧ್ಯಾಪಕರಾದ ಹನೀಫ್ ಸಅದಿ ಉಸ್ತಾದ್ ಧನ್ಯವಾದವಿತ್ತರು.

Leave a Comment

error: Content is protected !!