ಧರ್ಮಸ್ಥಳ: ಬೋಳಿಯರ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಗುದ್ದಿದ್ದ ಕಾಡಾನೆ: ಸ್ಕೂಟರ್ ಗೆ ಹಾನಿ

Suddi Udaya

ಬೆಳ್ತಂಗಡಿ: ಧರ್ಮಸ್ಥಳ- ನಿಡ್ಲೆ ಮಾರ್ಗದ ಬೋಳಿಯಾರ್‌ ಬಸ್ ಸ್ಟಾಂಡ್ ಬಳಿ ಇಂದು (ಆ.15) ಬೆಳಗ್ಗೆ, 7.40ರ ಸಮಯದಲ್ಲಿ ಆನೆ ಓಡಾಟದಿಂದ ಎರಡು ವಾಹನಗಳಿಗೆ ಹಾನಿಯಾದ ಘಟನೆ ನಡೆದಿದೆ.

ಧರ್ಮಸ್ಥಳ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಸ್ಕೂಟರ್‌ಗೆ ಹಾನಿಯಾಗಿದೆ.

ಬೋಳಿಯಾರ್‌ನ ಬಸ್ ಸ್ಟ್ಯಾಂಡ್ ಸಮೀಪ ಕಾಡಾನೆ ರಸ್ತೆ ದಾಟುತ್ತಿರುವ ಸಂದರ್ಭ ಆಕಸ್ಮಿಕವಾಗಿ ಬಸ್ ಗೆ ಗುದ್ದಿದ್ದು, ಹಿಂದಿನಿಂದ ಬರುತ್ತಿದ್ದ ಸ್ಕೂಟರ್ ಗೆ ಬಸ್ ತಾಗಿ ಹಾನಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Comment

error: Content is protected !!