September 6, 2026
ಗ್ರಾಮಾಂತರ ಸುದ್ದಿ

78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಉಜಿರೆ: ಆಗಸ್ಟ್ 15 ಗುರವಾರ 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಹಳೆಪೇಟೆ, ಉಜಿರೆ ಇದರ ವತಿಯಿಂದ ಟಿ. ಬಿ. ಕ್ರಾಸ್ ಜಂಕ್ಷನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಶರೀಫ್ ಎಸ್. ಎಂ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಹಾಗೂ ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಶರೀಫ್ ಎಸ್. ಎಂ (ಅಧ್ಯಕ್ಷರು SDTU ಹಳೆಪೇಟೆ ಉಜಿರೆ) ಬಂದಂತಹ ಎಲ್ಲಾ ಅಥಿತಿಗಳನ್ನು ಮರ್ಷಾದ್ ಉಜಿರೆ ಸ್ವಾಗತಿಸಿ, ಯಸಿರ್ ಫಾಝಿಲ್ ಅಲ್ ಫುರ್ಕಾನಿ (ಮುದರ್ರಿಸರು ಹಾಗೂ ಖತೀಬರು ಎಂ. ಜೆ. ಎಂ ಹಳೆಪೇಟೆ-ಉಜಿರೆ) ಹಿತನುಡಿಗಳೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಖಾದರ್ ಫರಂಗಿಪೇಟೆ (SDTU ರಾಜ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ) ಹಾಗೂ ಶರೀಫ್ ಬೆಳಾಲು ( ಸಾಮಾಜಿಕ ಚಿಂತಕರು, ಮಾಜಿ ಅಧ್ಯಕ್ಷರು-ಚುಟುಕು ಸಾಹಿತ್ಯ ಅಕೇಡೆಮಿ ಬೆಳ್ತಂಗಡಿ ತಾಲೂಕು) ಸಂದೇಶ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಾಲಿಹ್ ಮದ್ದಡ್ಕ (ಅಧ್ಯಕ್ಷರು, ಎಸ್. ಡಿ. ಟಿ. ಯೂ ಬೆಳ್ತಂಗಡಿ ಘಟಕ) ಡಾ. ಸೂರ್ಯ ನಾರಾಯಣ (ಚೇತನಾ ಕ್ಲಿನಿಕ್ ಟಿ. ಬಿ. ಕ್ರಾಸ್) ರಫೀಕ್ ಮುಗುಳಿ, ರಶೀದ್ ಶಾಮಿಯಾನ (ಉದ್ಯಮಿಗಳು),ಅಲ್ ಬುಖಾರಿ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕತ್ತಾರ್,ಸಾರ್ವಜನಿಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.ಹಾಗೂ ವೇದಿಕೆಯಲ್ಲಿ ಇದ್ದಂತಹ ಎಲ್ಲ ಅತಿಥಿಗಳಿಗೆ SDTU ಹಳೆಪೇಟೆ ಸಮಿತಿ ವತಿಯಿಂದ ಸನ್ಮಾನಿಸಲಾಯಿತು .ಕೊನೆಯದಾಗಿ ಸಹಲ್ ನೀರ್ಸಾಲ್ ಧನ್ಯವಾದ ಮಾಡಿದರು.

Related posts

ದ್ವಿತೀಯ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಅನನ್ಯ ರಿಗೆ ಜೆಸಿಐ ಕೊಕ್ಕಡ ಕಪಿಲ ಘಟಕದಿಂದ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ ಹಾಗೂ ನಿರ್ದೆಶಕ ತರುಣ್ ಸುಧೀರ್ ದಂಪತಿ ಭೇಟಿ

Suddi Udaya

ಉಜಿರೆಯ ಸಭ್ಯಾ ಹೆಬ್ಬಾರ್ ಗೆ ಪಿಎಚ್ ಡಿ ಪದವಿ

Suddi Udaya

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Suddi Udaya

ತಿಮ್ಮಣಬೆಟ್ಟು ಸ.ಉ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Suddi Udaya

ಉಜಿರೆಯ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya
error: Content is protected !!