July 23, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿ

ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿ ಕೇಂದ್ರ ದಲ್ಲಿ 78ನೇ ಸ್ವಾತಂತ್ರೋತ್ಸವ ವನ್ನು ಆಚರಿಸಲಾಯಿತು.

ಪಂಚಾಯತ್ ಸದಸ್ಯರಾದ ಶ್ರೀಮತಿ ಪದ್ಮಾವತಿಯವರು ಧ್ವಜಾರೋಹಣ ನೆರವೇರಿಸಿದರು. ಅಂಗನವಾಡಿ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಸಭಾಧ್ಯಕ್ಷರಾದ ಚಂದ್ರಪೂಜಾರಿಯವರು ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ವೇದಾವತಿ, ಸಲಹಾ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್,ಉಪಾಧ್ಯಕ್ಷರುಗಳಾದ ಎಮ್.ಸಿ ನಾರಾಯಣ ಗೌಡ, ರಘುನಾಥ, ಮಕ್ಕಳ ಪೋಷಕರು, ಊರವರು, ಸಲಹಾ ಸಮಿತಿ ಸದಸ್ಯರು, ಕಾವೇರಿ ಹಾಗು ಸ್ನೇಹ ಸ್ತ್ರೀ ಶಕ್ತಿ ತಂಡದ ಸದಸ್ಯರು, ಧರ್ಮಶ್ರೀ ಸಂಜೀವಿನಿ ತಂಡದ ಸದಸ್ಯರು, ಪಶು ಸಖಿ ಪೂರ್ಣಿಮಾ, ಹಳೆವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮನಿತಾ ಸಿ ಶೆಟ್ಟಿ ನಿರೂಪಿಸಿ ವಂದಿಸಿದರು.

ಸಹಾಯಕಿ ಸುನಂದ, ಭಾರತಿ, ಜಯಶ್ರೀ, ಅರುಣ ಎ ಮೆಹಂದಳೆ,ಚೆನ್ನಪ್ಪ ಶೆಟ್ಟಿ ಸಹಕರಿಸಿದರು.

Related posts

ತ್ರೋಬಾಲ್ ಪಂದ್ಯಾಟ : ಉಜಿರೆ ಅನುಗ್ರಹ ಶಾಲಾ ಬಾಲಕರ ತಂಡ ಪ್ರಥಮ

Suddi Udaya

ಹೋರಾಟದ ಮೂಲಕ ಧರ್ಮ ಜಾಗೃತಿಯನ್ನು ಮಾಡಿದ್ದೇನೆ: ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಉರುವಾಲು ಒಕ್ಕೂಟದಿಂದ ಕೋರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಪಿಡಬ್ಲೂಡಿ ಎಇಇ ಆಗಿ ಸಂಜೀವ ಕುಮಾರ್ ಜಿ .ಕೆ.

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಸರ್ಕಲ್ ಸಮಿತಿ ವಾರ್ಷಿಕ ಮಹಾಸಭೆ, ಸಮಿತಿ ರಚನೆ

Suddi Udaya

ತುಮಕೂರು ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ತುಮಕೂರು ಜಿಲ್ಲಾ ಎಡಿಷನ್ ಎಸ್ಪಿ ಯವರನ್ನು ಬೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದ ರಕ್ಷಿತ್ ಶಿವರಾಂ

Suddi Udaya
error: Content is protected !!