ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಮೂರ್ತೆದಾರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು

Suddi Udaya

ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತವನ್ನು ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಆಚರಿಸುತ್ತಿದ್ದು ಆ.18ರಂದು ಉಜಿರೆ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಕೊಲ್ಲಾಜೆ, ಉಪಾಧ್ಯಕ್ಷ ಸೀತಾರಾಮ ವಿ.ತೋಟತ್ತಾಡಿ, ನಿರ್ದೇಶಕರುಗಳಾದ ತುಕಾರಾಮ್ ಸಾಲಿಯಾನ್ ಆರ್ಲ, ಹರೀಶ್ ಸುವರ್ಣ ಕನ್ಯಾಡಿ, ನವೀನ್ ಚಂದ್ರ ಕೆ. ಎ. ನೊಣಯ್ಯ ಪೂಜಾರಿ ಕುಕ್ಕಾವು, ಮೆನೇಜರ್ ಪ್ರಮೋದ್ ಕುಮಾರ್, ಸಿಬ್ಬಂದಿ ಪುರುಷೋತ್ತಮ ಕೋಟ್ಯಾನ್ ಮೊದಲದವರು ಭಾಗವಹಿಸಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಸ್ವಾಮೀಜಿ ಇವರನ್ನು ಗೌರವಿಸಿದರು.

Leave a Comment

error: Content is protected !!